ತೋಚಿದ್ದು-ಗೀಚಿದ್ದು

ಮೆರವಣಿಗೆ

ಮೆರವಣಿಗೆ

ಇಷ್ಟು ದಿನ

ಗರ್ಭಗುಡಿಯಲ್ಲಿದ್ದ

“ಉತ್ಸವಮೂರ್ತಿಗಳು”

ಮತ್ತೆ ಅಧಿಕಾರಕ್ಕಾಗಿ

ಮೆರವಣಿಗೆ ಹೊರಟಿವೆ…

ನಿಮ್ಮ ಬೀದಿಗೂ

ಪರಿವಾರಗಳೊಂದಿಗೆ ಬರಲಿವೆ…

ನಿಮ್ಮಗಳ ಮನೆಗೂ ಬರಬಹುದು…

 

ವಿಶೇಷವೆಂದರೆ

ಈ ಉತ್ಸವಮೂರ್ತಿಗಳಿಗೆ

ನೀವು ಅಡ್ಡ ಬೀಳಬೇಕಿಲ್ಲ…

ಅವರೇ ನಿಮ್ಮ ಕಾಲಿಗೆರಗುತ್ತಾರೆ…

ಆದರದಿಂದ ಬರಮಾಡಿಕೊಳ್ಳಿ….

ಅವರ ಮಾತಿಗೆ ಕಿವಿಗೊಡಿ…

ಆಣೆ ಪ್ರಮಾಣಕ್ಕೆ ಮರುಳಾಗದಿರಿ…..

ನಿಮಗೆ ಸರಿ ಅನಿಸಿದ ವ್ಯಕ್ತಿಗಳನ್ನು ಆರಿಸಿ…

ಈ ಅವಕಾಶ ಮತ್ತೆ ಕೆಲವರಿಗೆ

ಸಿಗದೇ ಹೋಗಬಹುದು…

ಆಲೋಚಿಸಿ ಮತದಾನ ಮಾಡಿ…

ಆಸೆ ಆಮಿಷಕ್ಕೆ ಮರುಳಾಗದಿರಿ…

ನಮಸ್ಕಾರ…

ಹಂಪಿಯಾಜಿ

Leave a Reply

Your email address will not be published. Required fields are marked *