ಪ್ರಸ್ತಾವನೆ
ಡಾ. ಬಾಬಾಸಾಹೇಬ ಅಂಬೇಡ್ಕರರ ಚಳವಳಿಯಿಂದಾಗಿ ಪ್ರತಿ ಊರು ಊರುಗಳಲ್ಲಿ ಜಾಗೃತಿಯ ಗಾಳಿ ಬೀಸಲಾರಂಭಿಸಿತು. ದಲಿತ ಸಮಾಜ ದಲ್ಲಿ ನವಚೈತನ್ಯ ನಿರ್ಮಾಣವಾಯಿತು. ಇದಕ್ಕೆ ಈ ಕಾದಂಬರಿಯ ಔರಂಗಾಪುರವೂ ಹೊರತಾಗಿರಲಿಲ್ಲ. ಕಥಾನಾಯಕನಾದ ರಾಣ(ರಾನಬಾ) ಸಹ ಹೊರತಾಗಿರಲಿಲ್ಲ. ಅವನ ಬಳಿ ಇತರರಿಗಿಂತ ಹೆಚ್ಚು ಸಾಮಾಜಿಕ ದೃಷ್ಟಿಯಿತ್ತು. ಹೀಗಾಗಿ ಅವನು ೧೪ ಅಕ್ಟೋಬರ ೧೯೫೬ ಅಂಬೇಡ್ಕರರು ನಾಗಪುರದಲ್ಲಿ ಧಮ್ಮ ದೀಕ್ಷೆ ಸ್ವೀಕರಿಸಿದಾಗ ಅವನೂ ಹಾಜರಾದ. ಅವನು ಊರಿಗೆ ಮರಳಿದಾಗ ಅವನಲ್ಲಿ ಅಮೂಲ್ಯವಾದ ಬದಲಾವಣೆ ಯಾಯಿತು. ಆ ಬದಲಾವಣೆಯ ನಾಟ್ಯವನ್ನು ಉತ್ತಮ ಕಾಂಬಳೆಯವರು ‘ಬುದ್ಧನ ರಾಟಿ’ ಎಂಬ ಕಿರುಕಾದಂಬರಿಯಲ್ಲಿ ಚಿತ್ರಿಸಿದ್ದಾರೆ.
ರಾಣೂ ಈ ಕಾದಂಬರಿಯ ಏಕೈಕ ಕೇಂದ್ರ ವ್ಯಕ್ತಿ. ಈ ಕಥಾನಕವು ಅವನ ಭಾವವಿಶ್ವದ ಬಗೆಗಷ್ಟೇ ಮಾತಾಡದೇ ಸಾವಿರಾರು ರಾಣೂಗಳ ವ್ಯಕ್ತಿಗಳ ಬಗೆಗೆ, ಕುಶಲತೆಯ ಬಗೆಗೆ ಕ್ರಾಂತಿಯ ಬಗೆಗೆ ಕಾದಂಬರಿ ಮಾತಾಡುತ್ತಿರುತ್ತದೆ. ರಾಣೂನ ವಿಚಾರ ಕೃತಿಯೂ ಪ್ರತಿಧ್ವನಿಯಂತೆ ಈ ಕಾದಂಬರಿಯಲ್ಲಿ ಮೂಡುತ್ತಿರುತ್ತದೆ. ಅವನ ಕಾಯಕ, ಚಡಪಡಿಕೆ, ಮನದ ಸ್ಥಿತ್ಯಂತರವು ಸಮೂಹ ಭಾವನೆಯನ್ನೇ ಆವಿಷ್ಕಾರಗೊಳಿಸು ವಂತೆ ಕಾಣುತ್ತದೆ. ಅಂಬೇಡ್ಕರರು ಧಮ್ಮ ಸ್ವೀಕಾರದ ಘೋಷಣೆ ಮಾಡಿದ್ದೇ ತಡ ಪ್ರತಿ ಹಳ್ಳಿಗಳ ದಲಿತರಲ್ಲಿ ಉತ್ಸಾಹ ನಿರ್ಮಾಣವಾಯಿತು. ರಾಣೂನಲ್ಲೂ ಇದು ಕಾಣಿಸಿಕೊಂಡಿತು. ಹಣವಿಲ್ಲದ್ದರಿಂದ ಔರಂಗಾಪುರ ದಿಂದ ಮುಂಬೈವರೆಗೆ ಕಾಲ್ನಡಿಗೆಯಲ್ಲಿ ಹೋಗಿ ಅಲ್ಲಿಂದ ಮುಂದೆ ಅಸಂಖ್ಯಾತ ಭೀಮಸೈನಿಕರಲ್ಲಿ ಒಬ್ಬನಾಗಿ ತಾನೂ ಸಹಭಾಗಿಯಾಗಿ ರೈಲಿನಲ್ಲಿ ಪ್ರಯಾಣ ಮಾಡುತ್ತಾನೆ. ನಾಗಪುರದಲ್ಲಿ ನಡೆದ ದೀಕ್ಷಾ ಸಮಾರಂಭವನ್ನು ಸ್ವಂತ ಕಣ್ಣಿಂದ ನೋಡಿ, ಅವನೂ ದೀಕ್ಷೆಯನ್ನು ತೆಗೆದುಕೊಂಡು ಸಮಗ್ರವಾಗಿ ಬದಲಾಗುತ್ತಾನೆ. ರಾಣೂನಲ್ಲಾದ ಈ ಬದಲಾವಣೆಯನ್ನು ಕಾಂಬಳೆಯವರು ಸೂಕ್ಷ್ಮವಾಗಿ ಚಿತ್ರಿಸಿದ್ದಾರೆ. ರಾಣೂ ಅಕೋಲೆಯಲ್ಲಿ ಹೊಸ ಬಕೇಟು-ಹಗ್ಗ ಖರೀದಿಸಿ ಊರಿಗೆ ಮರಳು ತ್ತಾನೆ. ಊರ ಬಾವಿಗೆ ಹೋಗಿ ಅದೇ ಬಕೇಟಿನಿಂದ ನೀರೆತ್ತಿ ಮೈಮೇಲೆ ಸುರಿದುಕೊಳ್ಳುತ್ತಾನೆ. ಊರಿನ ದೃಷ್ಟಿಯಲ್ಲಿ ಇದು ಅಕ್ಷಮ್ಯ ಅಪರಾಧ. ಊರು ರೋಷದಿಂದ ಕುದಿಯುತ್ತದೆ. ಆದರೆ ರಾಣೂ ಮಾತ್ರ ಶಾಂತಚಿತ್ತದಿಂದ ಬೌದ್ಧನಾಗಿ ಸಾಗುತ್ತಾನೆ. ಪುನರ್ಜನ್ಮ ಆಗಿದೆ ಎಂದು ಭಾವಿಸುತ್ತಾನೆ. ಅದರಿಂದ ಅವನಲ್ಲಿ ಒಂದು ಹೊಸ ದೃಷ್ಟಿ ಪ್ರಾಪ್ತವಾಗು ತ್ತದೆ. ಅವನ ಆತ್ಮಸನ್ಮಾನ ಜಾಗೃತವಾಗುತ್ತದೆ. ರಾಣೂ ಈ ದೀಕ್ಷೆಯ ಸಾರ್ಥಕತೆಯ ಪ್ರತೀಕನಾಗಿದ್ದಾನೆ.
ಬೌದ್ಧ ಧರ್ಮ ಸ್ವೀಕರಿಸಿದ್ದರಿಂದ ದಲಿತರಲ್ಲಿ ಮಾನಸಿಕ ಬದಲಾವಣೆ ಯಾಯಿತು. ಇದಕ್ಕೆ ಅಂಬೇಡ್ಕರ ಚಳವಳಿಯೇ ಕಾರಣ. ಈ ಆಂದೋಲನ ವೆಂದರೆ ಆತ್ಮ ಶೋಧನ, ವಿದ್ರೋಹದ, ವ್ಯವಸ್ಥೆಯ ಪರಿವರ್ತನೆಯ ಪ್ರಕ್ರಿಯೆಯಾಗಿತ್ತು. ಇದು ದೀರ್ಘ ಕಾಲಾವಧಿಯ ಪ್ರಕ್ರಿಯೆ. ಮಹಾಡದ ಸಿಹಿನೀರಿನ, ನಾಶಿಕದ ಕಾಳಾರಾಮ ಮಂದಿರದ, ಅಂಬೇಡ್ಕರರ ಪಕ್ಷಕ್ಕೆ ಹಾಗೂ ಪಕ್ಷದ, ಚುನಾವಣೆಯ ಒಟ್ಟು ಪರಿಣಾಮವು ಅಂಬೇಡ್ಕರರ ಅನುಯಾಯಿಗಳ ಮೇಲಾಗಿತ್ತು. ಇದು ಅವರ ಮಾನಸಿಕ ಸಿದ್ಧತೆಗೆ ಧಮ್ಮವನ್ನು ಸ್ವೀಕರಿಸುವುದಕ್ಕೆ ಅನುಕೂಲವಾಯಿತು. ಅಂಬೇಡ್ಕರರು ಮಾನವೀಯ ಮೌಲ್ಯ ಸ್ಥಾಪನೆಗಾಗಿ, ಮನುಷ್ಯರಾಗಿ ಬದುಕಲೆಂದೇ ಬೌದ್ಧ ಧರ್ಮವನ್ನು ಸ್ವೀಕರಿಸಿದರು. ಈ ಸಂಪೂರ್ಣ ಪ್ರಕ್ರಿಯೆಯಲ್ಲಿಯ ಒಂದು ಘಟಕವೆಂದರೆ ಔರಂಗಾಪುರದ ರಾಣಪ್ಪ ಈ ಪ್ರೇರಣೆಯಿಂದಲೇ ವ್ಯವಸ್ಥೆಯ ವಿರೋಧಿಯಾಗುತ್ತಾನೆ. ರಾಣೂ ನಿರಕ್ಷರಿಯಾಗಿದ್ದರೂ ತೀರ ಸಂವೇದನಶೀಲನಾಗಿದ್ದ. ಈ ವಿವೇಕದಿಂದಲೇ ಅವನು ಊರಲ್ಲಿ ನ್ಯಾಯ ದಾನದ ಕಾಯಕ ಮಾಡುತ್ತಾನೆ. ಊರೂ ಇದನ್ನು ಒಪ್ಪಿಕೊಳ್ಳು ತ್ತದೆ. ಊರಲ್ಲಿ ಅವನ ಸಹಿಷ್ಣತೆಯ, ಪ್ರಜ್ಞಾವಂತಿಕೆಯ ಪ್ರತಿಮೆ ಸಿದ್ಧಗೊಳ್ಳು ತ್ತದೆ. ಆದುದರಿಂದ ಅವನ ಬಂಡಾಯದಿಂದ ಊರು ರೋಷ ಗೊಂಡರೂ ಗೌಡನ ಚಾಣಾಕ್ಷ ಉಪಾಯದಿಂದಾಗಿ ಪರಿಹಾರ ಸಿಗು ವಂತಾಗುತ್ತದೆ. ರಾತ್ರಿಯಿಡೀ ಜರುಗಿದ ಊರು ಮತ್ತು ರಾಣೂನ ನಡುವಣ ಸಂಘರ್ಷ ನಾಟಕೀಯ ತಿರುವು ನೀಡುವಲ್ಲಿ ಲೇಖಕರು ಯಶಸ್ವಿಯಾಗಿ ದ್ದಾರೆ.
ಬೌದ್ಧ ಧರ್ಮ ಸ್ವೀಕರಿಸಿದ ಬಳಿಕ ದಲಿತರಲ್ಲಾದ ಜಾಗೃತಿ ಚೈತನ್ಯ ವನ್ನು ನಮ್ಮ ಪೀಳಿಗೆ ಅನುಭವಿಸಿದೆ. ವೈಚಾರಿಕ ಕ್ರಾಂತಿಯನ್ನೂ-ಸ್ಥಿತ್ಯಂತರವನ್ನೂ ಕಂಡಿದೆ. ಅಂಬೇಡ್ಕರ ಚಳವಳಿಯಿಂದಾಗಿ ರಾಣೂನ ತಲೆಮಾರಿನವರಲ್ಲಿ ಎಂಥ ಬದಲಾವಣೆಯಾಯಿತು ಎನ್ನುವುದು ಈ ಕಾದಂಬರಿಯಲ್ಲಿ ಕಾಣಬಹುದಾಗಿದೆ. ಲೇಖಕ ಉತ್ತಮ ಕಾಂಬಳೆ ಸಹ ಈ ಅನುಭವದಿಂದ ಹಾದು ಹೋದವರೇ ಹೀಗಾಗಿ ಇಂಥದೊಂದು ಅದೃಶ್ಯ ಚರಿತ್ರೆಯನ್ನು ನಮ್ಮೆದುರಿಗಿರಿಸುವುದು ಅವರಿಗೆ ಸಾಧ್ಯವಾಯಿತು. ರಾಣೂನ ಭಾವ ವಿಶ್ವ-ವಿಚಾರ ವಿಶ್ವ ಹೇಗಿತ್ತು. ಅದು ಹೇಗೆ ಸಂಕ್ರಮಣ ಗೊಳ್ಳುತ್ತ ಹೋಯಿತು ಎಂಬುದನ್ನೂ ಲೇಖಕರಾಗಿ ಅವರು ಓದುಗರ ಎದುರಿಗೆ ಇರಿಸಿದ್ದಾರೆ. ಇಂಥ ಸಂಘರ್ಷಮಯ ಚಿತ್ರಣಕ್ಕೆ ೧೯೫೬ರ ಕಾಲದ ಸಾಮಾಜಿಕ-ಸಾಂಸ್ಕೃತಿಕ ಆಶಯ ಲಭಿಸಿದೆ.
ತಾನು ಬೌದ್ಧನಾಗಿದ್ದರಿಂದಲೇ ತನಗೆ ಬಾವಿಯಿಂದ ನೀರು ಸೇದುವ ಅಧಿಕಾರ ಪ್ರಾಪ್ತವಾಗಿದೆ ಎಂದು ಈ ಕಾದಂಬರಿಯ ನಾಯಕ ಭಾವಿಸು ತ್ತಾನೆ. ಇಲ್ಲಿ ಪರಂಪರೆ ಹಾಗೂ ಹೊಸ ಮಾನಸಿಕ ಸಂಘರ್ಷಕ್ಕೆ ಮಹತ್ವ ನೀಡಲಾಗಿದೆ. ಜೊತೆಗೆ ರಾಣೂ ಒಂದು ಕಡೆ, ಇಡೀ ಊರು ಮತ್ತೊಂದು ಕಡೆ ಎಂಬ ವಾಸ್ತವ ಸಂಘರ್ಷವೂ ಇಲ್ಲಿದೆ. ರಾಣೂನ ಆತ್ಮಸನ್ಮಾನವನ್ನು ಗೌರವಿಸುವ ಪರಿಹಾರವನ್ನು ಈ ಸಂಘರ್ಷದ ಕೊನೆಗೆ ಸೂಚಿಸಲಾಗಿದೆ.
‘ಬುದ್ಧನ ರಾಟಿ’ ಈ ಕಾದಂಬರಿಯ ಮುಖ್ಯ ಸೂತ್ರ ‘ಆತ್ಮಸನ್ಮಾನ’ ವಾಗಿದೆ. ಅದಿಲ್ಲದೆ ಮನುಷ್ಯ ಬದುಕಲಾರ. ರಾಣೂ ಈ ವ್ಯವಸ್ಥೆಗೆ ಬಲಿಯಾಗಿದ್ದ. ಅವನು ಗೌಂಡಿ(ಉಪ್ಪಾರ) ಕೆಲಸದಲ್ಲಿ ಕುಶಲನಾಗಿದ್ದ, ಅವನಲ್ಲಿ ನ್ಯಾಯದಾನದ ವಿವೇಕವಿತ್ತು. ಹಾಗೆಯೇ ಅಸ್ಪೃಶ್ಯನೂ-ದಲಿತನೂ ಆಗಿದ್ದ. ಇಂಥ ಬಹುಮುಖಿ ವ್ಯಕ್ತಿತ್ವ ಹೊಂದಿದ ರಾಣೂ ಊರಮಂದಿಗೆ ಬೇಕಾಗಿದ್ದ. ಹೀಗಾಗಿ ಒಂದೇ ಬಾವಿಯ ನೀರನ್ನು ಎರಡೂ ಸಮುದಾಯದವರು ಬಳಸುವ ತೀರ್ಪು ಹೊರಬರುತ್ತದೆ. ರಾಣೂ ವ್ಯವಸ್ಥೆಯಿಂದಲೇ ನ್ಯಾಯವನ್ನು ಎಳೆದು ತರುತ್ತಾನೆ. ಈ ವಾಸ್ತವದಲ್ಲಿನ ರಾಣೂ ಎಂಬ ವ್ಯಕ್ತಿಯ ಧೈರ್ಯ, ಹಾಗೂ ಕಾಂಬಳೆ ಕೈಕೊಂಡ ಚಿತ್ರಣ -ಇವೆರಡೂ ಸಂಗತಿಗಳು ವೈಶಿಷ್ಟ್ಯ ಹಾಗೂ ಮಹತ್ವದ್ದಾಗಿವೆ.
–ಮನೋಹರ ಜಾಧವ
ಲೇಖಕನ ಮಾತು
ಧಮ್ಮ ದೀಕ್ಷೆಗೆ ಐವತ್ತು ವರ್ಷ ತುಂಬಿದಾಗ ಈ ಮತಾಂತರದಿಂದ ದಲಿತರಿಗೆ ನಿಜವಾಗಿ ಲಭಿಸಿದ್ದೇನು ಎಂಬ ಹುಡುಕಾಟ ಶುರುವಾಯಿತು. ಆ ಶೋಧದ ವರದಿಯೂ ಬಂತು.
ಧಮ್ಮದಿಂದ ಜನರು ಜಾತಿಯನ್ನು ಧಿಕ್ಕರಿಸಿದರು. ನವಬೌದ್ಧರಾದರು. ಮಹಾರ-ಮಾದಿಗ ಜಾತಿ ಅಳಿಸಿ ಹೋಗಿತ್ತು. ದೇವರ ತಾಣದಲ್ಲಿ ಕರುಣಾಸಾಗರ ಬುದ್ಧ ಬಂದು ಕೂತ. ಮತಾಂತರದ ನಂತರದ ದಲಿತರ ಆರ್ಥಿಕ, ಶೈಕ್ಷಣಿಕ, ಸಾಂಸ್ಕೃತಿಕ ವಿಕಾಸದ ಲೆಕ್ಕವನ್ನೂ ಮಂಡಿಸಲಾಯಿತು! ನಾನು ದಲಿತನಲ್ಲ-ಅಸ್ಪೃಶ್ಯನಲ್ಲ ಎಂಬ ಸಿಂಹನಾದ ಎಲ್ಲೆಡೆ ಕೇಳಿಬಂತು. ಈಗಲೂ ಮಾರ್ದನಿಸುತ್ತಲಿದೆ.
ಮತಾಂತರದಲ್ಲಿ ಮಹಾರ ಸಮುದಾಯ ದೊಡ್ಡ ಪ್ರಮಾಣದಲ್ಲಿ ಭಾಗವಹಿಸಿತ್ತು. ಇತರ ಜಾತಿಯವರಿದ್ದರೂ ಸಂಖ್ಯೆ ಪ್ರಾತಿನಿಧಿಕವಾಗಿತ್ತು. ಬಳಿಕ ಓಬಿಸಿ, ಅಲೆಮಾರಿಗಳೂ ಮತಾಂತರಗೊಂಡರು. ಮಹಾರರು ‘ಹರಿಜನ’ ಎಂಬ ಪದವನ್ನೂ ನಿರಾಕರಿಸಿದರು. ೧೯೫೬ರ ನಂತರ ಉಪಜಾತಿಯನ್ನು ಧಿಕ್ಕರಿಸಿದರು. ಎಲ್ಲರೂ ಜಾತಿಮುಕ್ತರಾದರು, ಬಂಧ ಮುಕ್ತರಾದರು. ಅಲೆಗ್ಸಾಂಡರ್ ರಾಬರ್ಟಸನ್ ಎಂಬ ವ್ಯಕ್ತಿಯೂ ಖಿhe ಒಚಿhಚಿಚಿಡಿ ಈoಟಞ ಎಂಬ ಗ್ರಂಥದಲ್ಲಿ ಮಹಾರರ ಚರಿತ್ರೆಯನ್ನು ರಚಿಸಿದನು. ಅಂಬೇಡ್ಕರರ ‘ಶೂದ್ರರು ಮೂಲದಲ್ಲಿ ಯಾರಾಗಿದ್ದರು’ ಎಂಬ ಗ್ರಂಥದಷ್ಟೇ ಈ ಗ್ರಂಥವೂ ಮಹತ್ವದ್ದಾಗಿದೆ. ಇದನ್ನು ಓದಿದಾಗ ತಾವು ಧಮ್ಮವನ್ನೇ ಏಕೆ ಸ್ವೀಕರಿಸಿದೆವು ಎಂಬ ಬಗೆಗೆ ಸಂತೋಷ ವಾಗುತ್ತದೆ. ಅಂಬೇಡ್ಕರರು ದಲಿತರನ್ನು ಬುದ್ಧನ ಕರುಣಾಸಾಗರದಲ್ಲಿ, ಬೆಳಕಿನಲ್ಲಿ ತಂದರು.
ಕ್ರೈಸ್ತ ಅಥವಾ ಮುಸ್ಲಿಂ ಧರ್ಮ ಸ್ವೀಕರಿಸಿದ ದಲಿತರ ಮೂಲ ಜಾತಿ ಉಪಜಾತಿ ಹಾಗೇ ಉಳಿದುಕೊಂಡಿದೆ. ಮಹಾರರು ಮಾತ್ರ ತಮ್ಮ ಮೇಲೆ ಹೇರಿದ ಗುಲಾಮಗಿರಿಯ ಚರಿತ್ರೆಯನ್ನೇ ಧಿಕ್ಕರಿಸಿದ್ದಾರೆ. ಈಗವರು ಕೇವಲ ಬೌದ್ಧರಾಗಿದ್ದಾರೆ. ಬುದ್ಧನ ತೇಜಸ್ಸಿನ ಹಕ್ಕುದಾರರಾಗಿದ್ದಾರೆ.
ಬುದ್ಧನ ಧರ್ಮ ಮನುಷ್ಯ ಜೀವನದ ಮೇಲೆ ಎರಡು ಬಗೆಯ ಪರಿಣಾಮ ಬೀರುತ್ತದೆ. ಒಂದು ಬಾಹ್ಯ, ಮತ್ತೊಂದು ಆಂತರಿಕ. ಬುದ್ಧ ಆಂತರಿಕ ಬದಲಾವಣೆ ತರುತ್ತಾನೆ. ಜನರಿಗೆ ಬೆಳಕಾಗಲು ಹೇಳುತ್ತಾನೆ. ರೂಪಾಂತರಗೊಳ್ಳಲು ತಿಳಿಸುತ್ತಾನೆ. ಆಂತರಿಕ ಕತ್ತಲೆಯನ್ನು ಹೋಗಲಾಡಿಸಲು ಬುದ್ಧನು ಅತ್ತ ದೀಪ ಭವ ಹೇಳಿದ್ದಾನೆ. ಪ್ರತಿಯೊಬ್ಬನು ದೀಪವಾಗಬೇಕು, ಅರಿವೇ ಗುರು ಬುದ್ಧನ ಒಟ್ಟು ತತ್ವಜ್ಞಾನವು ಮಾನವನ ಆಂತರಿಕ ಕತ್ತಲೆಯನ್ನು ಹೋಗಲಾಡಿಸುತ್ತದೆ. ಕೇವಲ ಬುದ್ಧ ಮಾತ್ರ ಬೆಳಕು ನೀಡಬಲ್ಲ. ದುಃಖ ಮುಕ್ತಗೊಳಿಸಬಲ್ಲ. ಈ ಬೆಳಕಿನ ಮತ್ತೊಂದು ಹೆಸರೇ ಆತ್ಮಸನ್ಮಾನ ಧಮ್ಮ ಸ್ವೀಕರಿಸಿದ ಬಳಿಕ ಏನು ಸಿಕ್ಕಿತು ಎಂಬ ಪ್ರಶ್ನೆಗೆ ಉತ್ತರ ಆತ್ಮಸನ್ಮಾನ. ಅದೇ ಅರಿವೇ ಗುರು.
ಈ ಕಾದಂಬರಿಯೂ ಶ್ರೇಷ್ಠ ವಿಚಾರವಾದಿಯಾದ ಡಾ. ರಾವಸಾಹೇಬ ಕಸಬೆ ಅವರ ತಂದೆಯವರ ಜೀವನ ಹಾಗೂ ಮತಾಂತರದ ಬಳಿಕ ಅವರಿಗೆ ಲಭಿಸಿದ ಆತ್ಮಸನ್ಮಾನವನ್ನು ಆಧರಿಸಿದೆ. ಮುಂದೆ ಅದೇ ಪ್ರಾತಿನಿಧಿಕವಾಗುತ್ತದೆ. ಕಸಬೆಯವರ ತಂದೆಯವರ ಕಥೆ ಕೇಳಿ ನಾನು ಕಸಿವಿಸಿಗೊಂಡೆ. ಅದರ ಪರಿಣಾಮವೇ ಈ ಕಾದಂಬರಿ. ಇದರ ಬಗೆಗೆ ಹಲವರೊಂದಿಗೆ ಮಾತಾಡಿದೆ. ಕಸಬೆಯವರ ಜೊತೆಗೆ ಬುದ್ಧ ಗಯೆಗೂ ಹೋಗಿ ಬಂದೆ. ಬುದ್ಧನ ಎಲ್ಲ ತೀರ್ಥಸ್ಥಾನವನ್ನು ನೋಡಿದೆ. ಇಂದಿಗೂ ಅರಿತುಕೊಳ್ಳಲು ಪ್ರಯತ್ನಿಸುತ್ತಿದ್ದೇನೆ. ಧಮ್ಮವನ್ನೇ ಏಕೆ ಸ್ವೀಕರಿಸಬೇಕು ಎಂಬ ಬಗೆಗೆ ಅಂಬೇಡ್ಕರರ ಕ್ರಾಂತಿಕಾರಿ ಮಾತುಗಳೊಂದಿಗೂ ಮಾತಾಡಿದೆ. ಉತ್ತರ ಬೇರೆ-ಬೇರೆ ಬರುತ್ತಲಿತ್ತು. ನಾನು ಬಯಸಿದ ಉತ್ತರ ಸಿಗಲಿಲ್ಲ. ಹಾಗೆ ಉತ್ತರ ಶೋಧಿಸುವುದು ತಪ್ಪು ಎಂದೂ ಅನಿಸಿತು. ಆದರೂ ನನ್ನ ಮಾತು ಎಲ್ಲರಿಗೂ ಒಪ್ಪಿಗೆಯಾಯಿತು. ಕೊನೆಗೆ ಆತ್ಮಸನ್ಮಾನ ಸಿಗುತ್ತದೆ ಎಂಬ ನಿರ್ಣಯಕ್ಕೆ ಬಂದೆ. ಬುದ್ಧನಿಗೆ ಶರಣು ಹೋದರೆ ಇದು ಲಭಿಸುತ್ತದೆ. ಒಂದು ವೇಳೆ ಮನುಷ್ಯ ಆತ್ಮ ಸನ್ಮಾನವನ್ನೇ ಕಳಕೊಂಡರೆ.
ಇಲ್ಲಿ ಆತ್ಮಸನ್ಮಾನ ಕಳಕೊಂಡವರನ್ನು ಅಂಬೇಡ್ಕರರು ಮೂಕನಾಯಕ ನೆಂದು ಕರೆದರು. ವ್ಯವಸ್ಥೆಯೂ ಇವರನ್ನು ಮನುಷ್ಯರೆಂದು ಕರೆಯಲು ಸಿದ್ಧವಿರಲಿಲ್ಲ. ಅದನ್ನು ಪಡೆಯಲು ನಡೆಸಬೇಕಾದ ಮಹಾ ಸಂಗ್ರಾಮದ ಭಾಗವೆಂದರೆ ಮತಾಂತರ. ಜಾತಿ ಬದಲಾಯಿಸುವುದೆಂದರೆ ಮತಾಂತರ ವಲ್ಲ. ಬಿಳಿ ದಾರ ಹಿಡಿದು ಪ್ರತಿಜ್ಞೆ ಮಾಡುವುದೆಂದರೆ ಮತಾಂತರವಲ್ಲ. ಮೀಸಲಾತಿ ಎಂದರೂ ಮತಾಂತರವಲ್ಲ. ಈ ಸಂಗತಿಗಳು ಮಹತ್ವದ್ದಾಗಿ ದ್ದರೂ ಕಿರಿಯವು ಎಲ್ಲಕ್ಕಿಂತ ಮಹತ್ವದ ಸಂಗತಿ ಎಂದರೆ ಆತ್ಮಸನ್ಮಾನದ ಬೆಳಕಿನಲ್ಲಿ ಸ್ನಾನ ಮಾಡುವುದೆಂದರೆ ಮತಾಂತರವಾಗಿತ್ತು. ಯಾರು ಏನೇ ಹೇಳಲಿ, ಮತಾಂತರವೆಂದರೆ ಆತ್ಮಸನ್ಮಾನದ ಹೋರಾಟದ ಶಿಖರ ಸ್ಥಿತಿ. ಹೊಸ ಮನುಷ್ಯನಾಗುವುದೆಂದರೆ ಆತ್ಮಸನ್ಮಾನದ ಯಜಮಾನ ನಾಗುವುದು. ಇದೇ ಸಾಮಾಜಿಕ ಚಳವಳಿಯ ಅಂತಿಮ ಉದ್ದೇಶ ಅಂಬೇಡ್ಕರರು ಉಳಿದದ್ದನ್ನೆಲ್ಲ ಕೊಟ್ಟರು. ಜೊತೆಗೆ ಆತ್ಮ ಸನ್ಮಾನದ ರೂಪದಲ್ಲಿ ಸಾಮಾನ್ಯ ದಲಿತರಾಗಿ ಮಾನವೀಯತೆಯ ಹೊಸ ಸನದು ಬರೆದರು. ಧಮ್ಮ ಸ್ವೀಕರಿಸಿದವರೆಲ್ಲ ಆತ್ಮಸನ್ಮಾನವನ್ನು ಜತನ ಮಾಡ ಬೇಕಿದೆ. ಆತ್ಮಸನ್ಮಾನಕ್ಕಾಗಿ ಒಂದು ಮಹಾಯುದ್ಧವೇ ನಡೆದಿದೆ ಉಳಿಸಲು ಮತ್ತೊಂದು ಮಹಾಯುದ್ಧ ನಡೆಸಬೇಕಾಗಿದೆ. ಅದರಲ್ಲೂ ವಿಜಯಶಾಲಿ ಗಳಾಗಬೇಕಿದೆ.
ಹೊಸ ಆರ್ಥಿಕ ಧೋರಣೆಯು ಮನುಷ್ಯನ ಆತ್ಮಸನ್ಮಾನ ಮರೆಯು ವಂತೆ ಮಾಡುತ್ತದೆ. ಹೊರಗಿನಿಂದ ಫ್ಲಡ್ಲೈಟ್ ಬೀಳುತ್ತಿದ್ದರೂ ಒಳಗಿನ ನಂದಾದೀಪ ಸದಾ ಉರಿಯುತ್ತಿರಬೇಕು. ಆದರೆ ಬೆಳಕು ಆತ್ಮಸನ್ಮಾನ ಉಳಿಸಲೆಂದೇ ಇದೆ. ಸ್ವತಃ ದೀಪವಾಗುವ ಮಹಾಕ್ರಾಂತಿಕಾರಿ ಸಿದ್ಧಾಂತ ವನ್ನು ಸಂರಕ್ಷಿಸಬೇಕಿದೆ. ಎಂಥ ಹೋರಾಟಕ್ಕೂ ಸಿದ್ಧವಾಗಬೇಕಿದೆ.
ಧಮ್ಮ ಆತ್ಮಸನ್ಮಾನ ನೀಡುತ್ತದೆ. ಅರಿವಿಗಾಗಿ ಹೋರಾಡಲು ಕಲಿಸು ತ್ತದೆ. ಈ ಮೂಲಕವೇ ಹೊಸ ಸಮಾಜ ನಿರ್ಮಾಣವಾಗಲಿದೆ. ಕಾದಂಬರಿಯ ನಾಯಕ ಖಚಿತವಾಗಿ ಯಾಕೆ ಹೋರಾಡಿದ ಎನ್ನುವುದೂ ಗಮನಕ್ಕೆ ಬರುತ್ತದೆ. ಧಮ್ಮ ಕೇವಲ ಪೂಜೆಗಾಗಿಯಲ್ಲ, ಆತ್ಮಸನ್ಮಾನದಿಂದ ಬದುಕಲು ಬೇಕಾಗುವ ಹೊಸ ಸಮಾಜದ ಕಡೆಗೆ ಇಡುವ ಒಂದು ಹೆಜ್ಜೆಗಾಗಿ ಇದೆ.
ಈ ಕಿರುಕಾದಂಬರಿಯ ರಾಣೂ ಆತ್ಮಸನ್ಮಾನವನ್ನು ಕರಗತ ಮಾಡಿ ಕೊಂಡೇ ಸತತ ಹೋರಾಡುವುದನ್ನು ಕಾಣುತ್ತೇವೆ. ಬಾಬಾಸಾಹೇಬರೇ ಅವನಿಗೆ ಪ್ರೇರಣೆಯನ್ನು ನೀಡಿದ್ದಾರೆ. ಅದು ಹೋರಾಡುವಂತೆ ಮಾಡು ತ್ತದೆ. ಈ ಆತ್ಮಸನ್ಮಾನದಲ್ಲೇ ವಿಜಯದ ಬೀಜವಿದೆ. ನಾನೂ ಚಿಕ್ಕವನಿದ್ದಾಗ ಸತ್ತ ದನಕರ ಎಳೆದಿದ್ದೇನೆ, ನೀರಿನ ಭಿಕ್ಷೆ ಬೇಡಿದ್ದೇನೆ, ಆಯಗಾರಿಕೆಯ ಕೆಲಸ ಮಾಡಿದ್ದೇನೆ, ನಾನು ಇದರ ಬಗೆಗೆ ಯೋಚಿಸುತ್ತಲೇ ಬುದ್ಧನ ರಾಟಿಯವರೆಗೆ ತಲುಪಿದ್ದೇನೆ. ನಮ್ಮ ಪೂರ್ವಿಕರ ಹೋರಾಟ ಗಂಭೀರ ವಾಗಿತ್ತು. ಹೋರಾಡುತ್ತಲೇ ಬೋಧಿವೃಕ್ಷವಿರುವ ಸುಂದರ ರಸ್ತೆಯನ್ನು ಸಿದ್ಧ ಮಾಡಿದ್ದಾರೆ. ಅಲ್ಲಿಂದ ಪರಿವರ್ತನೆಗಾಗಿ ಹೊರಟ ಶಸ್ತ್ರಗಳ ಖಡ್ ಖಡ್ ಸದ್ದು ಕೇಳಿಬರುತ್ತಲಿದೆ. ಬರುತ್ತಲೇ ಇರುತ್ತದೆ.
ಈ ಕಾದಂಬರಿ ಬರೆದು ಮುಗಿಸಿದ ಬಳಿಕ ಅದನ್ನು ಹಲವು ಲೇಖಕರಿಗೆ ಕಳಿಸಿದೆ. ಅವರ ಪ್ರತಿಕ್ರಿಯೆ ಓದಿ ಉತ್ಸಾಹ ಹೆಚ್ಚಿದೆ. ರಾವ ಸಾಹೇಬ ಕಸಬೆ, ಯಶವಂತ ಮನೋಹರ, ಪಾನತವಣೆಯವರೊಂದಿಗೆ ಈ ವಿಷಯದ ಬಗೆಗೆ ಹಲವಾರು ಸಲ ಚರ್ಚಿಸಿದ್ದೇನೆ. ಅವರು ನೀಡಿದ ಉಪಯುಕ್ತ ಮಾಹಿತಿಗಾಗಿ ಋಣಿಯಾಗಿದ್ದೇನೆ. ಈ ಸಂದರ್ಭದಲ್ಲಿ ದಿ. ಗೋವಿಂದ ಪಾನಸರೆಯವರನ್ನು ಮರೆಯುವುದು ಸಾಧ್ಯವಿಲ್ಲ.
ಇದು ಬುದ್ಧನ ರಾಟಿ, ಸರಕಾರದ್ದಲ್ಲ. ಹೀಗಾಗಿ ಅದು ಸತತ ಸುತ್ತುತ್ತಲೇ ಇರುತ್ತದೆ ಎಂಬ ನಂಬಿಕೆ ನನಗಿದೆ.
– ಉತ್ತಮ ಕಾಂಬಳೆ
Reviews
There are no reviews yet.