ಲೇಖಕನ ಮಾತು
ಗೌರೀಪುರ ಇದು ನನ್ನ ಐದನೆಯ ಕಾದಂಬರಿ. ಈ ಮೊದಲು ಪ್ರಕಟವಾದ ನಾಲ್ಕೂ ಕಾದಂಬರಿಗಳು-ದೇವರಾಯ, ಜುಲೈ ೨೨, ೧೯೪೭, ಬಾಜೀರಾವ್ ಮಸ್ತಾನಿ ಹಾಗೂ ಸಾವಿತ್ರಿಬಾಯಿ ಫುಲೆ- ಚಲನಚಿತ್ರಗಳಾಗಿ ಜನಮನ್ನಣೆ ಪಡೆದವು. ದೇವರಾಯ ಕಾದಂಬರಿ ಇಂಗಳೆ ಮಾರ್ಗವೆಂದು ಚಲನಚಿತ್ರವಾಗಿ ರಾಜ್ಯ ಪ್ರಶಸ್ತಿ, ರಾಷ್ಟ್ರ ಪ್ರಶಸ್ತಿಗೆ ಭಾಜನವಾಯಿತು. ಅದಕ್ಕೆ ನಾನೇ ಬರೆದ ಹಾಡು ಪಾನ್ ಪಾನ್ ಪಾನ್ ಮಸ್ತ ರಂಗೀಲಾ ಕ್ಕೆ ಅಂತಾರಾಷ್ಟ್ರೀಯ ಜ್ಯುರಿ ಪ್ರಶಸ್ತಿಯೂ ಬಂದಿತು. ಜುಲೈ ೨೨, ೧೯೪೭ ಈ ಕಾದಂಬರಿ ಅದೇ ಹೆಸರಿನಲ್ಲಿ ಚಲನಚಿತ್ರವಾಗಿ ಅದಕ್ಕೆ ರಾಜ್ಯ ಸರ್ಕಾರದ ಅತ್ಯುತ್ತಮ ಕಥೆ ಪ್ರಶಸ್ತಿ ಬಂದಿತು. ಬಾಜೀರಾವ್ ಮಸ್ತಾನಿ ಕಾದಂಬರಿಯ ಹಲವಾರು ಪುಟಗಳು ಹಿಂದಿಯ ಬಾಜೀರಾವ್ ಮಸ್ತಾನಿ ಚಲನಚಿತ್ರದಲ್ಲಿ ಇನ್ಪುಟ್ಗಳೆಂದು ಉಪಯೋಗಿಸಲ್ಪಟ್ಟವು. ಭಾರತದ ಮೊಟ್ಟ ಮೊದಲ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಅವರ ಜೀವನ ಚರಿತ್ರೆಯ ಮೇಲೆ ಆಧಾರಿತ ಸಾವಿತ್ರಿಬಾಯಿ ಫುಲೆ ಕಾದಂಬರಿಯು ಅದೇ ಹೆಸರಿನಲ್ಲಿ ಚಲನಚಿತ್ರವಾಗಿ ಪ್ರೇಕ್ಷಕರೆದುರು ಬಂದಿತು. ದೇವರಾಯ ಕಾದಂಬರಿ ಹೊರತುಪಡಿಸಿದರೆ ಉಳಿದ ಮೂರೂ ಕಾದಂಬರಿಗಳನ್ನು ಹೊಸಪೇಟೆಯ ಯಾಜಿ ಪ್ರಕಾಶನದವರು ಪ್ರಕಟಿಸಿದ್ದಾರೆ. ಈಗಿನ ಗೌರೀಪುರ ಕಾದಂಬರಿಯನ್ನೂ ಅವರೇ ಪ್ರಕಟಿಸುತ್ತಿದ್ದಾರೆ. ಪ್ರಕಾಶನದ ಒಡತಿಯಾದ ಶ್ರೀಮತಿ ಸವಿತಾ ಯಾಜಿಯವರಿಗೆ, ಗೆಳೆಯ ಗಣೇಶ್ ಯಾಜಿಯವರಿಗೆ ನನ್ನ ಕೃತಜ್ಞತೆಗಳು ಸಲ್ಲುತ್ತವೆ.
ಈ ಕಾದಂಬರಿಯನ್ನು ಒಂದು ವಿಶಿಷ್ಟ ದೃಷ್ಟಿಕೋನವನ್ನಿಟ್ಟುಕೊಡು ಬರೆದಿದ್ದೇನೆ. ನಗರದ ಜೀವನ, ಅಲ್ಲಿಯ ತಲ್ಲಣಗಳು, ಧಾವಂತ, ಹಳ್ಳಿಯ ಜೀವನ ಶೈಲಿ, ಅಲ್ಲಿಯ ಆತ್ಮೀಯತೆ ಇವುಗಳು ಇಲ್ಲಿ ಸಾಕಾರಗೊಂಡಿವೆ. ಹನ್ನೆರಡು, ಹದಿಮೂರು ವರ್ಷದ ಯುವ ಬಾಲಕನ ಕಣ್ಣಿನಿಂದ ನಗರವನ್ನು ಹಾಗೂ ಹಳ್ಳಿಯನ್ನು ನೋಡುವ ತಂತ್ರವನ್ನು ಇಲ್ಲಿ ಉಪಯೋಗಿಸಿದ್ದೇನೆ. ಇಲ್ಲಿ ಹೆಸರಿಸಿದ ಗೌರೀಪುರವೆಂಬ ಹಳ್ಳಿ ಭಾರತದ ಅನೇಕ ಹಳ್ಳಿಗಳಂತೆಯೇ ಒಂದು ಹಳ್ಳಿ. ಒಂದು ಅರ್ಥದಲ್ಲಿ ಗೌರೀಪುರ ಸಾಂಕೇತಿಕವಾಗಿ ಈ ಎಲ್ಲ ಹಳ್ಳಿಗಳನ್ನು ಪ್ರತಿನಿಧಿಸುತ್ತದೆ. ಗೌರೀಪುರ ಇಡೀ ಕಾದಂಬರಿಯನ್ನು ನಿಯಂತ್ರಿಸುವ ಒಂದು ಶಕ್ತಿ ಕೇಂದ್ರವಾಗಿದೆ. ಅದೇ ಕಾದಂಬರಿಯ ಕೇಂದ್ರಬಿಂದುವಾಗಿದೆ.
ನಾನು ನನ್ನ ಬಾಲ್ಯದಲ್ಲಿ ಪುರಾಣದ ಅನೇಕ ಕಥೆಗಳನ್ನು ಕೇಳಿದ್ದೇನೆ; ಓದಿದ್ದೇನೆ. ನನ್ನ ಅವ್ವ ಗೌರಬಾಯಿ ಅತ್ಯುದ್ಭುತ ಕಥೆಗಾರ್ತಿಯಾಗಿದ್ದಳು. ಅವಳಿಗೆ ಅಕ್ಷರ ಜ್ಞಾನವಿರದಿದ್ದರೂ ತನ್ನ ಕಲ್ಪನಾಶಕ್ತಿಯಿಂದ ಕಥೆಗಳನ್ನು ಸೃಷ್ಟಿಸಿ ಹೇಳುತ್ತಿದ್ದಳು. ಆಕೆ ಹೇಳಿದ ಒಂದೆರಡು ಕಥೆಗಳನ್ನು ಕಾದಂಬರಿಯಲ್ಲಿ ಬಳಸಿಕೊಂಡಿದ್ದೇನೆ. ಅವುಗಳಿಗೆ ಸಮಕಾಲೀನ ಮೌಲ್ಯ ನೀಡಲು ಯತ್ನಿಸಿದ್ದೇನೆ. ಕಥೆ ಯಾವತ್ತೂ ಮುಗಿಯುವುದಿಲ್ಲ; ಕೇಳೋರು ಇರುವವರೆಗೆ ಅದು ನಡೀತಾನೇ ಇರ್ತದೆ ಎಂದು ನನ್ನ ಅವ್ವ ಹೇಳುತ್ತಿದ್ದಳು. ಅವಳು ಹೇಳುವ ಕಥೆಯಲ್ಲಿ ರಾಜ, ರಾಣಿ, ದೇವರು, ದೆವ್ವ ಎಲ್ಲರೂ ಬರ್ತಿದ್ದರು. ಆದರೆ ಕೊನೆಗೆ ಗೆಲ್ಲುವವ ಮನುಷ್ಯನೇ ಆಗಿರುತ್ತಿದ್ದ. ಅವಳ ಆಶಯವನ್ನು ಸಾಕಾರ ಗೊಳ್ಳಿಸಲು ನಾನಿಲ್ಲಿ ಪ್ರಯತ್ನಿಸಿದ್ದೇನೆ.
ಜೂನ್ ೨೨, ೨೦೧೮ರಂದು ಅಸ್ಸಾಂ ರಾಜ್ಯದ ರಾಜಧಾನಿಯಾಗಿರುವ ಗುವಾಹತಿ ಯಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಜನರಲ್ ಕೌನ್ಸಿಲ್ ಸಭೆ ಹಾಗೂ ಅನುವಾದ ಸಾಹಿತ್ಯ ಕೃತಿಗಳ ಪ್ರಶಸ್ತಿ ಪ್ರದಾನ ಸಮಾರಂಭವಿತ್ತು. ಸಭೆಯಲ್ಲಿ ಭಾಗವಹಿಸಲೆಂದು ನಾನು ಜೂನ್ ೨೧ರ ಸಂಜೆಯೇ ಗುವಾಹತಿಯನ್ನು ತಲುಪಿದ್ದೆ. ಅಸ್ಸಾಂ ಹಾಗೂ ಇತರ ಪೂರ್ವ ರಾಜ್ಯಗಳಲ್ಲಿ ಸೂರ್ಯ ನಸುಕಿನಲ್ಲೇ ಉದಯಿಸುತ್ತಾನೆ. ಜೂನ್ ೨೨ರ ನಸುಕಿನ ೪ ಗಂಟೆಗೇ ಸೂರ್ಯ ಪೂರ್ವದಲ್ಲಿ ಕಾಣಿಸಿಕೊಂಡ. ನಾನು ಎದ್ದು ನನ್ನ ಕಾದಂಬರಿಯ ಗೌರೀಪುರಕ್ಕೆ ಆ ಹೆಸರು ಅದ್ಹೇಗೆ ಬಂತೆಂಬುದನ್ನು ಪುರಾಣದ ಆಧಾರದಲ್ಲಿ ಬರೆದು ಮುಗಿಸಿದೆ. ಅಂದು ಸಂಜೆ ಗುವಾಹತಿಯ ಸುಪ್ರಸಿದ್ಧ ಕಾಮ್ಯಾಖ್ಯದೇವಿ ದೇವಸ್ಥಾನಕ್ಕೆ ಭೇಟಿ ನೀಡಿದೆ. ಕಾಮ್ಯಾಖ್ಯ ದೇವಿಯ ಅವತಾರದ ಕಥೆಯನ್ನು ಕೇಳಿ ನಾನೊಂದು ಕ್ಷಣ ದಿಗ್ಮೂಢನಾದೆ. ಬೆಳಿಗ್ಗೆ ನಾನು ಬರೆದ ಕಥೆಯೇ ಅದಾಗಿತ್ತು. ತನ್ನ ತಂದೆ ದಕ್ಷನಿಂದ ಅವಮಾನಿತಗೊಂಡ ದಾಕ್ಷಾಯಣಿ ಆತ ಯೋಜಿಸಿದ ಯಜ್ಞಕುಂಡದಲ್ಲಿ ಹಾರಿ ಆತ್ಮದಹನ ಮಾಡಿಕೊಳ್ಳುತ್ತಾಳೆ. ಆಗ ಶಿವ ಸಿಟ್ಟೆಗೆದ್ದು ದಕ್ಷನನ್ನು ಕೊಂದು ಯಜ್ಞವನ್ನೇ ಧ್ವಂಸ ಮಾಡುತ್ತಾನೆ. ನಂತರ ಆತ ತನ್ನ ಹೆಂಡತಿ ದಾಕ್ಷಾಯಣಿಯ ಅರೆ ಸುಟ್ಟು ಕರಕಲಾದ ದೇಹವನ್ನು ಯಜ್ಞಕುಂಡದಿಂದ ಹೊರ ತೆಗೆದು ಅದನ್ನು ತನ್ನ ಭುಜದ ಮೇಲೆ ಹಾಕಿಕೊಂಡು ಮತಿಭ್ರಷ್ಟನಾಗಿ ಲೋಕ ಲೋಕ ಅಡ್ಡಾಡಲಾರಂಭಿಸುತ್ತಾನೆ. ಸತ್ತು ಕರಕಲಾದ ದಾಕ್ಷಾಯಣಿಯ ಒಂದೊಂದು ಅಂಗಗಳು ಒಂದೊಂದು ಕಡೆ ಕಳಚಿ ಬೀಳಲಾರಂಭಿಸುತ್ತದೆ. ಕೈ ಒಂದು ಕಡೆಗೆ, ಕಾಲು ಇನ್ನೊಂದು ಕಡೆಗೆ, ಕಿವಿ ಮಗದೊಂದು ಕಡೆಯಾದರೆ, ಮೂಗು ಇನ್ನೊಂದೆಡೆಗೆ ಕಳಚಿ ಬೀಳುತ್ತದೆ. ಅವಳ ಅಂಗಾಂಗಗಳು ಎಲ್ಲೆಲ್ಲಿ ಬೀಳುತ್ತವೆಯೋ ಅಲ್ಲೆಲ್ಲ ಶಕ್ತಿಪೀಠಗಳು ಹುಟ್ಟಿ ಭಕ್ತರ ಕಾಮನೆಗಳನ್ನು ಈಡೇರಿಸುವ ಕೇಂದ್ರಗಳಾಗುತ್ತವೆ. ದಾಕ್ಷಾಯಣಿಯ ಅಂಗಾಂಗಗಳು ಕಳಚಿ ಬೀಳುತ್ತಿದ್ದರೂ ಶಿವ ಅವಳ ಸುಟ್ಟು ಕರಕಲಾದ ದೇಹವನ್ನು ಹೊತ್ತುಕೊಂಡು ತಿರುಗುತ್ತಿರುತ್ತಾನೆ. ಗುವಾಹತಿಯಲ್ಲಿ ಆಕೆಯ ಯೋನಿ ಕಳಚಿ ಬೀಳುತ್ತದೆ. ಆ ದಾಕ್ಷಾಯಣಿಯೇ ಇಲ್ಲಿ ಕಾಮ್ಯಾಖ್ಯ ದೇವಿಯಾಗಿ ಕಾಣಿಸಿಕೊಂಡಿದ್ದಾಳೆ. ಈ ಪ್ರಸಿದ್ಧ ದೇವಾಲಯದಲ್ಲಿ ದೇವಿಯ ಮೂರ್ತಿ ಇಲ್ಲ ಬದಲು ಯೋನಿ ಆಕಾರದ ಆಕೃತಿಯನ್ನೇ ಇಲ್ಲಿ ಪೂಜಿಸಲಾಗುತ್ತದೆ. ಈ ಕ್ಷೇತ್ರವು ತಾಂತ್ರಿಕ ಕ್ಷೇತ್ರವೆಂದೂ ಪ್ರಸಿದ್ಧವಾಗಿದೆ. ನಾಗಾಸಾಧುಗಳು, ಅವಧೂತರು, ಮಂತ್ರ ಮಾಟಗಳನ್ನು ಮಾಡುವವರು ಇಲ್ಲಿ ಬಂದು ತಮ್ಮ ಸಾಧನೆಯನ್ನು ಸಿದ್ಧಿ ಮಾಡಿಕೊಂಡು ಹೋಗುತ್ತಾರೆ. ಇಲ್ಲಿ ಬೇಡಿದ ಹರಕೆಯು ಹುಸಿ ಹೋಗುವುದಿಲ್ಲವೆಂಬ ಪ್ರತೀತಿಯೂ ಇದೆ. ಕಾಮ್ಯಾಖ್ಯವೆಂದರೆ ಇಷ್ಟಾರ್ಥಗಳನ್ನು ಸಿದ್ಧಿಸುವವಳು ಎಂದೇ ಅರ್ಥ. ಭಾರತದ ಉಳಿದೆಲ್ಲ ಶಕ್ತಿಪೀಠಗಳಿಗಿಂತಲೂ ಈ ಪೀಠಕ್ಕೆ ಅನನ್ಯವಾದ ಮಹತ್ವವಿದೆ.
ನಾನು ಅದೇ ಮುಂಜಾನೆ ಪುರಾಣದ ಈ ಕಥೆಯನ್ನು ಕಾದಂಬರಿಗಾಗಿ ಬರೆದಿದ್ದೆ. ಆದರೆ ಸಂಜೆ ಅದೇ ಕಥೆಯ ನಾಯಕಿಯೆದುರು ನಿಂತುಕೊಂಡಿದ್ದೆ. ಇದೊಂದು ಯೋಗಾಯೋಗವೆಂದೇ ನಾನು ನಂಬಿದ್ದೇನೆ; ಈ ಯೋಗಾಯೋಗದ ಬಗ್ಗೆ ನನಗೆ ಅಚ್ಚರಿಯೂ ಆಗ್ತಾ ಇದೆ; ಸಂತೋಷವೂ ಆಗುತ್ತಲಿದೆ.
ಕಾದಂಬರಿಯನ್ನು ಬರೆಯುವಾಗ ಸಲಹೆ, ಸೂಚನೆಗಳನ್ನು ನೀಡಿದ ಚಂದ್ರಕಾಂತ ಪೋಕಳೆ, ರಾಮಕೃಷ್ಣ ಮರಾಠೆ, ಎ.ಬಿ. ಘಾಟಗೆ, ಯ.ರು ಪಾಟೀಲ, ರವಿ ಕೋಟಾರಗಸ್ತಿ ಗೆಳೆಯರಿಗೆ ನನ್ನ ವಂದನೆಗಳು ಸಲ್ಲುತ್ತವೆ.
ಗೆಳೆಯರಾದ ಮನು ಬಳಿಗಾರ್, ಸತೀಶ ಕುಲಕರ್ಣಿ, ಎಂ.ಕೆ. ಜೈನಾಪುರ, ಮಹಾಂತೇಶ ಚಲವಾದಿ, ಅರವಿಂದ ಮಾಲಗತ್ತಿ ಅವರ ಪ್ರೀತಿಗೆ ನನ್ನ ನೆನಕೆಗಳು ಸಲ್ಲುತ್ತವೆ.
ಈ ಕೃತಿಯನ್ನು ಸುಪ್ರಸಿದ್ಧ ಕಾದಂಬರಿಕಾರ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ, ಬೆಟಗೇರಿ ಕೃಷ್ಣಶರ್ಮ ಟ್ರಸ್ಟ್ ಅಧ್ಯಕ್ಷ ರಾಘವೇಂದ್ರ ಪಾಟೀಲ ಅವರ ನಿರ್ವಾಜ್ಯ ಪ್ರೀತಿಗೆ ಅರ್ಪಿಸಿದ್ದೇನೆ. ಅವರ ತೇರು ಕಾದಂಬರಿ ಕನ್ನಡ ಸಾಹಿತ್ಯದಲ್ಲಿ ಒಂದು ವಿಶಿಷ್ಟವಾದ ಕೃತಿ. ವಯಸ್ಸಿನಲ್ಲಿ, ಪ್ರತಿಭೆಯಲ್ಲಿ ಹಿರಿಯರಾಗಿದ್ದರೂ ರಾಘವೇಂದ್ರ ಪಾಟೀಲರು ವಯಸ್ಸಿನಲ್ಲಿ, ಪ್ರತಿಭೆಯಲ್ಲಿ ಕಿರಿಯರಾಗಿರುವ ನಮ್ಮಂತವರಿಗೆ ಸ್ಫೂರ್ತಿಯ ಚಿಲುಮೆಯಾಗಿದ್ದಾರೆ. ಅವರು ಅಧ್ಯಕ್ಷರಾಗಿರುವ ಬೆಟಗೇರಿ ಕೃಷ್ಣಶರ್ಮ ಟ್ರಸ್ಟ್ ನಾಡಿನ ಹಿರಿ ಕಿರಿಯ ಸಾಹಿತಿಗಳ, ಕವಿಗಳ, ಕಲಾವಿದರ ಪ್ರಶಂಸೆಗೆ ಪಾತ್ರವಾಗಿದೆ. ರಾಘವೇಂದ್ರ ಪಾಟೀಲರಿಗೂ ನನ್ನ ನಮನಗಳು ಸಲ್ಲುತ್ತವೆ.
ಹಿರಿಯರಾದ ಗುರುಲಿಂಗ ಕಾಪಸೆ, ಪಾಟೀಲ ಪುಟ್ಟಪ್ಪ, ಚಂದ್ರಶೇಖರ ಕಂಬಾರ, ಬರಗೂರು ರಾಮಚಂದ್ರಪ್ಪ, ಚಂದ್ರಶೇಖರ ಪಾಟೀಲ, ಜಿ.ಎಸ್ ಆಮೂರ, ಕೆ.ವಿ. ತಿರುಮಲೇಶ್ ಮುಂತಾದವರು ನನ್ನ ಸಾಹಿತ್ಯ ಕೃಷಿಗೆ ಒಂದು ಶಿಸ್ತನ್ನು ಹಾಕಿಕೊಟ್ಟಿದ್ದಾರೆ. ಅವರೆಲ್ಲರಿಗೂ ನನ್ನ ವಂದನೆಗಳು ಸಲ್ಲುತ್ತವೆ.
ಮುಖಪುಟ ರಚಿಸಿದ ಕಲಾವಿದ ಅರುಣಕುಮಾರ, ಬೆಂಗಳೂರು ಮುದ್ರಣದ ಹೊಣೆ ಹೊತ್ತ ಬೆಂಗಳೂರಿನ ಇಳಾ ಮುದ್ರಣದ ಶ್ರೀ ಗುರುಮೂರ್ತಿ ಮತ್ತು ಬಳಗಕ್ಕೆ, ಡಿ.ಟಿ.ಪಿ. ಮಾಡಿದ ಶಂಕರ ಬೀ ಅತ್ತಿಮರದ ಅವರಿಗೂ ನಾನು ಕೃತಜ್ಞನಾಗಿದ್ದೇನೆ.
ಬಾಳ ಸಂಗಾತಿ ಸುಮಾ, ಮಕ್ಕಳಾದ ಸಂಸ್ಕೃತಿ, ರಾಕೇಶ್ ರಾಮಗಡ, ಶ್ರೇಯಸ್, ಸಂತೋಷ ಪಾಟೀಲ ಹಾಗೂ ಮೊಮ್ಮಗಳಾದ ಪ್ರಿಶಾ ಅವರ ಪ್ರೀತಿಗೆ ಕೃತಜ್ಞತೆಗಳು.
ಡಾ. ಸರಜೂ ಕಾಟ್ಕರ್
ಲೇಖಕನ ಮಾತು
ಗೌರೀಪುರ ಇದು ನನ್ನ ಐದನೆಯ ಕಾದಂಬರಿ. ಈ ಮೊದಲು ಪ್ರಕಟವಾದ ನಾಲ್ಕೂ ಕಾದಂಬರಿಗಳು-ದೇವರಾಯ, ಜುಲೈ ೨೨, ೧೯೪೭, ಬಾಜೀರಾವ್ ಮಸ್ತಾನಿ ಹಾಗೂ ಸಾವಿತ್ರಿಬಾಯಿ ಫುಲೆ- ಚಲನಚಿತ್ರಗಳಾಗಿ ಜನಮನ್ನಣೆ ಪಡೆದವು. ದೇವರಾಯ ಕಾದಂಬರಿ ಇಂಗಳೆ ಮಾರ್ಗವೆಂದು ಚಲನಚಿತ್ರವಾಗಿ ರಾಜ್ಯ ಪ್ರಶಸ್ತಿ, ರಾಷ್ಟ್ರ ಪ್ರಶಸ್ತಿಗೆ ಭಾಜನವಾಯಿತು. ಅದಕ್ಕೆ ನಾನೇ ಬರೆದ ಹಾಡು ಪಾನ್ ಪಾನ್ ಪಾನ್ ಮಸ್ತ ರಂಗೀಲಾ ಕ್ಕೆ ಅಂತಾರಾಷ್ಟ್ರೀಯ ಜ್ಯುರಿ ಪ್ರಶಸ್ತಿಯೂ ಬಂದಿತು. ಜುಲೈ ೨೨, ೧೯೪೭ ಈ ಕಾದಂಬರಿ ಅದೇ ಹೆಸರಿನಲ್ಲಿ ಚಲನಚಿತ್ರವಾಗಿ ಅದಕ್ಕೆ ರಾಜ್ಯ ಸರ್ಕಾರದ ಅತ್ಯುತ್ತಮ ಕಥೆ ಪ್ರಶಸ್ತಿ ಬಂದಿತು. ಬಾಜೀರಾವ್ ಮಸ್ತಾನಿ ಕಾದಂಬರಿಯ ಹಲವಾರು ಪುಟಗಳು ಹಿಂದಿಯ ಬಾಜೀರಾವ್ ಮಸ್ತಾನಿ ಚಲನಚಿತ್ರದಲ್ಲಿ ಇನ್ಪುಟ್ಗಳೆಂದು ಉಪಯೋಗಿಸಲ್ಪಟ್ಟವು. ಭಾರತದ ಮೊಟ್ಟ ಮೊದಲ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಅವರ ಜೀವನ ಚರಿತ್ರೆಯ ಮೇಲೆ ಆಧಾರಿತ ಸಾವಿತ್ರಿಬಾಯಿ ಫುಲೆ ಕಾದಂಬರಿಯು ಅದೇ ಹೆಸರಿನಲ್ಲಿ ಚಲನಚಿತ್ರವಾಗಿ ಪ್ರೇಕ್ಷಕರೆದುರು ಬಂದಿತು. ದೇವರಾಯ ಕಾದಂಬರಿ ಹೊರತುಪಡಿಸಿದರೆ ಉಳಿದ ಮೂರೂ ಕಾದಂಬರಿಗಳನ್ನು ಹೊಸಪೇಟೆಯ ಯಾಜಿ ಪ್ರಕಾಶನದವರು ಪ್ರಕಟಿಸಿದ್ದಾರೆ. ಈಗಿನ ಗೌರೀಪುರ ಕಾದಂಬರಿಯನ್ನೂ ಅವರೇ ಪ್ರಕಟಿಸುತ್ತಿದ್ದಾರೆ. ಪ್ರಕಾಶನದ ಒಡತಿಯಾದ ಶ್ರೀಮತಿ ಸವಿತಾ ಯಾಜಿಯವರಿಗೆ, ಗೆಳೆಯ ಗಣೇಶ್ ಯಾಜಿಯವರಿಗೆ ನನ್ನ ಕೃತಜ್ಞತೆಗಳು ಸಲ್ಲುತ್ತವೆ.
ಈ ಕಾದಂಬರಿಯನ್ನು ಒಂದು ವಿಶಿಷ್ಟ ದೃಷ್ಟಿಕೋನವನ್ನಿಟ್ಟುಕೊಡು ಬರೆದಿದ್ದೇನೆ. ನಗರದ ಜೀವನ, ಅಲ್ಲಿಯ ತಲ್ಲಣಗಳು, ಧಾವಂತ, ಹಳ್ಳಿಯ ಜೀವನ ಶೈಲಿ, ಅಲ್ಲಿಯ ಆತ್ಮೀಯತೆ ಇವುಗಳು ಇಲ್ಲಿ ಸಾಕಾರಗೊಂಡಿವೆ. ಹನ್ನೆರಡು, ಹದಿಮೂರು ವರ್ಷದ ಯುವ ಬಾಲಕನ ಕಣ್ಣಿನಿಂದ ನಗರವನ್ನು ಹಾಗೂ ಹಳ್ಳಿಯನ್ನು ನೋಡುವ ತಂತ್ರವನ್ನು ಇಲ್ಲಿ ಉಪಯೋಗಿಸಿದ್ದೇನೆ. ಇಲ್ಲಿ ಹೆಸರಿಸಿದ ಗೌರೀಪುರವೆಂಬ ಹಳ್ಳಿ ಭಾರತದ ಅನೇಕ ಹಳ್ಳಿಗಳಂತೆಯೇ ಒಂದು ಹಳ್ಳಿ. ಒಂದು ಅರ್ಥದಲ್ಲಿ ಗೌರೀಪುರ ಸಾಂಕೇತಿಕವಾಗಿ ಈ ಎಲ್ಲ ಹಳ್ಳಿಗಳನ್ನು ಪ್ರತಿನಿಧಿಸುತ್ತದೆ. ಗೌರೀಪುರ ಇಡೀ ಕಾದಂಬರಿಯನ್ನು ನಿಯಂತ್ರಿಸುವ ಒಂದು ಶಕ್ತಿ ಕೇಂದ್ರವಾಗಿದೆ. ಅದೇ ಕಾದಂಬರಿಯ ಕೇಂದ್ರಬಿಂದುವಾಗಿದೆ.
ನಾನು ನನ್ನ ಬಾಲ್ಯದಲ್ಲಿ ಪುರಾಣದ ಅನೇಕ ಕಥೆಗಳನ್ನು ಕೇಳಿದ್ದೇನೆ; ಓದಿದ್ದೇನೆ. ನನ್ನ ಅವ್ವ ಗೌರಬಾಯಿ ಅತ್ಯುದ್ಭುತ ಕಥೆಗಾರ್ತಿಯಾಗಿದ್ದಳು. ಅವಳಿಗೆ ಅಕ್ಷರ ಜ್ಞಾನವಿರದಿದ್ದರೂ ತನ್ನ ಕಲ್ಪನಾಶಕ್ತಿಯಿಂದ ಕಥೆಗಳನ್ನು ಸೃಷ್ಟಿಸಿ ಹೇಳುತ್ತಿದ್ದಳು. ಆಕೆ ಹೇಳಿದ ಒಂದೆರಡು ಕಥೆಗಳನ್ನು ಕಾದಂಬರಿಯಲ್ಲಿ ಬಳಸಿಕೊಂಡಿದ್ದೇನೆ. ಅವುಗಳಿಗೆ ಸಮಕಾಲೀನ ಮೌಲ್ಯ ನೀಡಲು ಯತ್ನಿಸಿದ್ದೇನೆ. ಕಥೆ ಯಾವತ್ತೂ ಮುಗಿಯುವುದಿಲ್ಲ; ಕೇಳೋರು ಇರುವವರೆಗೆ ಅದು ನಡೀತಾನೇ ಇರ್ತದೆ ಎಂದು ನನ್ನ ಅವ್ವ ಹೇಳುತ್ತಿದ್ದಳು. ಅವಳು ಹೇಳುವ ಕಥೆಯಲ್ಲಿ ರಾಜ, ರಾಣಿ, ದೇವರು, ದೆವ್ವ ಎಲ್ಲರೂ ಬರ್ತಿದ್ದರು. ಆದರೆ ಕೊನೆಗೆ ಗೆಲ್ಲುವವ ಮನುಷ್ಯನೇ ಆಗಿರುತ್ತಿದ್ದ. ಅವಳ ಆಶಯವನ್ನು ಸಾಕಾರ ಗೊಳ್ಳಿಸಲು ನಾನಿಲ್ಲಿ ಪ್ರಯತ್ನಿಸಿದ್ದೇನೆ.
ಜೂನ್ ೨೨, ೨೦೧೮ರಂದು ಅಸ್ಸಾಂ ರಾಜ್ಯದ ರಾಜಧಾನಿಯಾಗಿರುವ ಗುವಾಹತಿ ಯಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಜನರಲ್ ಕೌನ್ಸಿಲ್ ಸಭೆ ಹಾಗೂ ಅನುವಾದ ಸಾಹಿತ್ಯ ಕೃತಿಗಳ ಪ್ರಶಸ್ತಿ ಪ್ರದಾನ ಸಮಾರಂಭವಿತ್ತು. ಸಭೆಯಲ್ಲಿ ಭಾಗವಹಿಸಲೆಂದು ನಾನು ಜೂನ್ ೨೧ರ ಸಂಜೆಯೇ ಗುವಾಹತಿಯನ್ನು ತಲುಪಿದ್ದೆ. ಅಸ್ಸಾಂ ಹಾಗೂ ಇತರ ಪೂರ್ವ ರಾಜ್ಯಗಳಲ್ಲಿ ಸೂರ್ಯ ನಸುಕಿನಲ್ಲೇ ಉದಯಿಸುತ್ತಾನೆ. ಜೂನ್ ೨೨ರ ನಸುಕಿನ ೪ ಗಂಟೆಗೇ ಸೂರ್ಯ ಪೂರ್ವದಲ್ಲಿ ಕಾಣಿಸಿಕೊಂಡ. ನಾನು ಎದ್ದು ನನ್ನ ಕಾದಂಬರಿಯ ಗೌರೀಪುರಕ್ಕೆ ಆ ಹೆಸರು ಅದ್ಹೇಗೆ ಬಂತೆಂಬುದನ್ನು ಪುರಾಣದ ಆಧಾರದಲ್ಲಿ ಬರೆದು ಮುಗಿಸಿದೆ. ಅಂದು ಸಂಜೆ ಗುವಾಹತಿಯ ಸುಪ್ರಸಿದ್ಧ ಕಾಮ್ಯಾಖ್ಯದೇವಿ ದೇವಸ್ಥಾನಕ್ಕೆ ಭೇಟಿ ನೀಡಿದೆ. ಕಾಮ್ಯಾಖ್ಯ ದೇವಿಯ ಅವತಾರದ ಕಥೆಯನ್ನು ಕೇಳಿ ನಾನೊಂದು ಕ್ಷಣ ದಿಗ್ಮೂಢನಾದೆ. ಬೆಳಿಗ್ಗೆ ನಾನು ಬರೆದ ಕಥೆಯೇ ಅದಾಗಿತ್ತು. ತನ್ನ ತಂದೆ ದಕ್ಷನಿಂದ ಅವಮಾನಿತಗೊಂಡ ದಾಕ್ಷಾಯಣಿ ಆತ ಯೋಜಿಸಿದ ಯಜ್ಞಕುಂಡದಲ್ಲಿ ಹಾರಿ ಆತ್ಮದಹನ ಮಾಡಿಕೊಳ್ಳುತ್ತಾಳೆ. ಆಗ ಶಿವ ಸಿಟ್ಟೆಗೆದ್ದು ದಕ್ಷನನ್ನು ಕೊಂದು ಯಜ್ಞವನ್ನೇ ಧ್ವಂಸ ಮಾಡುತ್ತಾನೆ. ನಂತರ ಆತ ತನ್ನ ಹೆಂಡತಿ ದಾಕ್ಷಾಯಣಿಯ ಅರೆ ಸುಟ್ಟು ಕರಕಲಾದ ದೇಹವನ್ನು ಯಜ್ಞಕುಂಡದಿಂದ ಹೊರ ತೆಗೆದು ಅದನ್ನು ತನ್ನ ಭುಜದ ಮೇಲೆ ಹಾಕಿಕೊಂಡು ಮತಿಭ್ರಷ್ಟನಾಗಿ ಲೋಕ ಲೋಕ ಅಡ್ಡಾಡಲಾರಂಭಿಸುತ್ತಾನೆ. ಸತ್ತು ಕರಕಲಾದ ದಾಕ್ಷಾಯಣಿಯ ಒಂದೊಂದು ಅಂಗಗಳು ಒಂದೊಂದು ಕಡೆ ಕಳಚಿ ಬೀಳಲಾರಂಭಿಸುತ್ತದೆ. ಕೈ ಒಂದು ಕಡೆಗೆ, ಕಾಲು ಇನ್ನೊಂದು ಕಡೆಗೆ, ಕಿವಿ ಮಗದೊಂದು ಕಡೆಯಾದರೆ, ಮೂಗು ಇನ್ನೊಂದೆಡೆಗೆ ಕಳಚಿ ಬೀಳುತ್ತದೆ. ಅವಳ ಅಂಗಾಂಗಗಳು ಎಲ್ಲೆಲ್ಲಿ ಬೀಳುತ್ತವೆಯೋ ಅಲ್ಲೆಲ್ಲ ಶಕ್ತಿಪೀಠಗಳು ಹುಟ್ಟಿ ಭಕ್ತರ ಕಾಮನೆಗಳನ್ನು ಈಡೇರಿಸುವ ಕೇಂದ್ರಗಳಾಗುತ್ತವೆ. ದಾಕ್ಷಾಯಣಿಯ ಅಂಗಾಂಗಗಳು ಕಳಚಿ ಬೀಳುತ್ತಿದ್ದರೂ ಶಿವ ಅವಳ ಸುಟ್ಟು ಕರಕಲಾದ ದೇಹವನ್ನು ಹೊತ್ತುಕೊಂಡು ತಿರುಗುತ್ತಿರುತ್ತಾನೆ. ಗುವಾಹತಿಯಲ್ಲಿ ಆಕೆಯ ಯೋನಿ ಕಳಚಿ ಬೀಳುತ್ತದೆ. ಆ ದಾಕ್ಷಾಯಣಿಯೇ ಇಲ್ಲಿ ಕಾಮ್ಯಾಖ್ಯ ದೇವಿಯಾಗಿ ಕಾಣಿಸಿಕೊಂಡಿದ್ದಾಳೆ. ಈ ಪ್ರಸಿದ್ಧ ದೇವಾಲಯದಲ್ಲಿ ದೇವಿಯ ಮೂರ್ತಿ ಇಲ್ಲ ಬದಲು ಯೋನಿ ಆಕಾರದ ಆಕೃತಿಯನ್ನೇ ಇಲ್ಲಿ ಪೂಜಿಸಲಾಗುತ್ತದೆ. ಈ ಕ್ಷೇತ್ರವು ತಾಂತ್ರಿಕ ಕ್ಷೇತ್ರವೆಂದೂ ಪ್ರಸಿದ್ಧವಾಗಿದೆ. ನಾಗಾಸಾಧುಗಳು, ಅವಧೂತರು, ಮಂತ್ರ ಮಾಟಗಳನ್ನು ಮಾಡುವವರು ಇಲ್ಲಿ ಬಂದು ತಮ್ಮ ಸಾಧನೆಯನ್ನು ಸಿದ್ಧಿ ಮಾಡಿಕೊಂಡು ಹೋಗುತ್ತಾರೆ. ಇಲ್ಲಿ ಬೇಡಿದ ಹರಕೆಯು ಹುಸಿ ಹೋಗುವುದಿಲ್ಲವೆಂಬ ಪ್ರತೀತಿಯೂ ಇದೆ. ಕಾಮ್ಯಾಖ್ಯವೆಂದರೆ ಇಷ್ಟಾರ್ಥಗಳನ್ನು ಸಿದ್ಧಿಸುವವಳು ಎಂದೇ ಅರ್ಥ. ಭಾರತದ ಉಳಿದೆಲ್ಲ ಶಕ್ತಿಪೀಠಗಳಿಗಿಂತಲೂ ಈ ಪೀಠಕ್ಕೆ ಅನನ್ಯವಾದ ಮಹತ್ವವಿದೆ.
ನಾನು ಅದೇ ಮುಂಜಾನೆ ಪುರಾಣದ ಈ ಕಥೆಯನ್ನು ಕಾದಂಬರಿಗಾಗಿ ಬರೆದಿದ್ದೆ. ಆದರೆ ಸಂಜೆ ಅದೇ ಕಥೆಯ ನಾಯಕಿಯೆದುರು ನಿಂತುಕೊಂಡಿದ್ದೆ. ಇದೊಂದು ಯೋಗಾಯೋಗವೆಂದೇ ನಾನು ನಂಬಿದ್ದೇನೆ; ಈ ಯೋಗಾಯೋಗದ ಬಗ್ಗೆ ನನಗೆ ಅಚ್ಚರಿಯೂ ಆಗ್ತಾ ಇದೆ; ಸಂತೋಷವೂ ಆಗುತ್ತಲಿದೆ.
ಕಾದಂಬರಿಯನ್ನು ಬರೆಯುವಾಗ ಸಲಹೆ, ಸೂಚನೆಗಳನ್ನು ನೀಡಿದ ಚಂದ್ರಕಾಂತ ಪೋಕಳೆ, ರಾಮಕೃಷ್ಣ ಮರಾಠೆ, ಎ.ಬಿ. ಘಾಟಗೆ, ಯ.ರು ಪಾಟೀಲ, ರವಿ ಕೋಟಾರಗಸ್ತಿ ಗೆಳೆಯರಿಗೆ ನನ್ನ ವಂದನೆಗಳು ಸಲ್ಲುತ್ತವೆ.
ಗೆಳೆಯರಾದ ಮನು ಬಳಿಗಾರ್, ಸತೀಶ ಕುಲಕರ್ಣಿ, ಎಂ.ಕೆ. ಜೈನಾಪುರ, ಮಹಾಂತೇಶ ಚಲವಾದಿ, ಅರವಿಂದ ಮಾಲಗತ್ತಿ ಅವರ ಪ್ರೀತಿಗೆ ನನ್ನ ನೆನಕೆಗಳು ಸಲ್ಲುತ್ತವೆ.
ಈ ಕೃತಿಯನ್ನು ಸುಪ್ರಸಿದ್ಧ ಕಾದಂಬರಿಕಾರ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ, ಬೆಟಗೇರಿ ಕೃಷ್ಣಶರ್ಮ ಟ್ರಸ್ಟ್ ಅಧ್ಯಕ್ಷ ರಾಘವೇಂದ್ರ ಪಾಟೀಲ ಅವರ ನಿರ್ವಾಜ್ಯ ಪ್ರೀತಿಗೆ ಅರ್ಪಿಸಿದ್ದೇನೆ. ಅವರ ತೇರು ಕಾದಂಬರಿ ಕನ್ನಡ ಸಾಹಿತ್ಯದಲ್ಲಿ ಒಂದು ವಿಶಿಷ್ಟವಾದ ಕೃತಿ. ವಯಸ್ಸಿನಲ್ಲಿ, ಪ್ರತಿಭೆಯಲ್ಲಿ ಹಿರಿಯರಾಗಿದ್ದರೂ ರಾಘವೇಂದ್ರ ಪಾಟೀಲರು ವಯಸ್ಸಿನಲ್ಲಿ, ಪ್ರತಿಭೆಯಲ್ಲಿ ಕಿರಿಯರಾಗಿರುವ ನಮ್ಮಂತವರಿಗೆ ಸ್ಫೂರ್ತಿಯ ಚಿಲುಮೆಯಾಗಿದ್ದಾರೆ. ಅವರು ಅಧ್ಯಕ್ಷರಾಗಿರುವ ಬೆಟಗೇರಿ ಕೃಷ್ಣಶರ್ಮ ಟ್ರಸ್ಟ್ ನಾಡಿನ ಹಿರಿ ಕಿರಿಯ ಸಾಹಿತಿಗಳ, ಕವಿಗಳ, ಕಲಾವಿದರ ಪ್ರಶಂಸೆಗೆ ಪಾತ್ರವಾಗಿದೆ. ರಾಘವೇಂದ್ರ ಪಾಟೀಲರಿಗೂ ನನ್ನ ನಮನಗಳು ಸಲ್ಲುತ್ತವೆ.
ಹಿರಿಯರಾದ ಗುರುಲಿಂಗ ಕಾಪಸೆ, ಪಾಟೀಲ ಪುಟ್ಟಪ್ಪ, ಚಂದ್ರಶೇಖರ ಕಂಬಾರ, ಬರಗೂರು ರಾಮಚಂದ್ರಪ್ಪ, ಚಂದ್ರಶೇಖರ ಪಾಟೀಲ, ಜಿ.ಎಸ್ ಆಮೂರ, ಕೆ.ವಿ. ತಿರುಮಲೇಶ್ ಮುಂತಾದವರು ನನ್ನ ಸಾಹಿತ್ಯ ಕೃಷಿಗೆ ಒಂದು ಶಿಸ್ತನ್ನು ಹಾಕಿಕೊಟ್ಟಿದ್ದಾರೆ. ಅವರೆಲ್ಲರಿಗೂ ನನ್ನ ವಂದನೆಗಳು ಸಲ್ಲುತ್ತವೆ.
ಮುಖಪುಟ ರಚಿಸಿದ ಕಲಾವಿದ ಅರುಣಕುಮಾರ, ಬೆಂಗಳೂರು ಮುದ್ರಣದ ಹೊಣೆ ಹೊತ್ತ ಬೆಂಗಳೂರಿನ ಇಳಾ ಮುದ್ರಣದ ಶ್ರೀ ಗುರುಮೂರ್ತಿ ಮತ್ತು ಬಳಗಕ್ಕೆ, ಡಿ.ಟಿ.ಪಿ. ಮಾಡಿದ ಶಂಕರ ಬೀ ಅತ್ತಿಮರದ ಅವರಿಗೂ ನಾನು ಕೃತಜ್ಞನಾಗಿದ್ದೇನೆ.
ಬಾಳ ಸಂಗಾತಿ ಸುಮಾ, ಮಕ್ಕಳಾದ ಸಂಸ್ಕೃತಿ, ರಾಕೇಶ್ ರಾಮಗಡ, ಶ್ರೇಯಸ್, ಸಂತೋಷ ಪಾಟೀಲ ಹಾಗೂ ಮೊಮ್ಮಗಳಾದ ಪ್ರಿಶಾ ಅವರ ಪ್ರೀತಿಗೆ ಕೃತಜ್ಞತೆಗಳು.
ಡಾ. ಸರಜೂ ಕಾಟ್ಕರ್
Santosh naik –
ಖ್ಯಾತ ಲೇಖಕ ಹಾಗೂ ಹಿರಿಯ ಪತ್ರಕರ್ತ ಬೆಳಗಾವಿಯ ಡಾ ಸರಜೂ ಕಾಟ್ಕರ್ ಅವರು ಬರೆದ ‘ಗೌರೀಪುರ’ ಕಾದಂಬರಿ ಆಧಾರಿತ ‘ದಂತಪುರಾಣ ‘ ಚಲನಚಿತ್ರಕ್ಕೆ ರಾಜ್ಯ ಸರ್ಕಾರದ ಮೂರು ಪ್ರಶಸ್ತಿಗಳು ಬಂದಿವೆ.
ಚಲನಚಿತ್ರದಲ್ಲಿ ಅಭಿನಯಿಸಿದ ಮಂಜುಳಮ್ಮ (ಅಜ್ಜಿ) ಅವರಿಗೆ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ, ಮಾಸ್ಟರ್ ಅಹಿಲ್ ಅನ್ಸಾರಿ ಗೆ (ಅಜ್ಜಿಯ ಮೊಮ್ಮಗ ಪಾತ್ರ) ಅತ್ಯುತ್ತಮ ಬಾಲ ನಟ ಪ್ರಶಸ್ತಿ ಹಾಗೂ ಚಲನಚಿತ್ರದ ಗಾಯಕಿ ಅರುಂಧತಿ ವಶಿಷ್ಠ ಅವರಿಗೆ ಅತ್ಯುತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿಗಳು ಬಂದಿವೆ.
‘ಗೌರೀಪುರ’ ಕಾದಂಬರಿಯು ಅಜ್ಜಿ ಮತ್ತು ಅವಳ ಮೊಮ್ಮಗನ ಸುತ್ತ ತಿರುಗುತ್ತ ಹಳೆಯ ಮತ್ತು ಹೊಸ ಮೌಲ್ಯಗಳ ಸಂಘರ್ಷವನ್ನು ಬಲು ಪರಿಣಾಮಕಾರಿಯಾಗಿ ಅನಾವರಣಗೊಳ್ಳಿಸಿದ ಕಾದಂಬರಿಯಾಗಿದೆ. ಕಾದಂಬರಿ ಯನ್ನು ಹೊಸಪೇಟೆಯ ಗಣೇಶ ಯಾಜಿ ಹಾಗೂ ಸವಿತಾ ಯಾಜಿಯವರ ಯಾಜಿ ಪ್ರಕಾಶನವು ಪ್ರಕಟಿಸಿದೆ.
ಈ ಚಲನಚಿತ್ರದ ಎಲ್ಲ ಹಾಡುಗಳನ್ನು ಪ್ರಖ್ಯಾತ ಕವಿ ಸತೀಶ ಕುಲಕರ್ಣಿ ಬರೆದಿದ್ದಾರೆ. ಸಂಭಾಷಣೆಯನ್ನು ಪ್ರಖ್ಯಾತ ರಂಗಕರ್ಮಿ ಹಾಗೂ ನಟ , ನಿರ್ದೇಶಕ ಶ್ರೀಪತಿ ಮಂಜನಬೈಲು ಬರೆದಿದ್ದಾರೆ.
ಈ ಹಿಂದೆ ಡಾ ಸರಜೂ ಕಾಟ್ಕರ್ ಅವರು ಬರೆದ ಕಾದಂಬರಿ ‘ ದೇವರಾಯ’ ವು ‘ಇಂಗಳೆ ಮಾರ್ಗ ‘ ಎಂಬ ಹೆಸರಿನಲ್ಲಿ , ‘ ಜುಲೈ ೨೨,೧೯೪೭ ‘ ಕಾದಂಬರಿಯು ಅದೇ ಹೆಸರಿನಲ್ಲಿ , ‘ಸಾವಿತ್ರಿಬಾಯಿ ಫುಲೆ ‘ ಕಾದಂಬರಿಯು ಅದೇ ಹೆಸರಿನಲ್ಲಿ ಚಲನಚಿತ್ರ ಗಳಾಗಿ ರಾಜ್ಯ, ಅಂತಾರಾಜ್ಯ ಹಾಗೂ ಅಂತರ ರಾಷ್ಟ್ರೀಯ ಪ್ರಶಸ್ತಿಗಳಿಗೆ ಭಾಜನವಾಗಿದ್ದವು. ‘ಬಾಜೀರಾವ ಮಸ್ತಾನಿ ‘ ಎಂಬ ಅವರ ಕನ್ನಡ ಕಾದಂಬರಿಯ ಇನ್ ಪುಟ್ ಗಳನ್ನು ಹಿಂದಿ ಚಲನಚಿತ್ರ ‘ಬಾಜೀರಾವ ಮಸ್ತಾನಿ’ ಯಲ್ಲಿ ಅಳವಡಿಸಲಾಗಿತ್ತು. ಆ ಚಲನಚಿತ್ರವೂ ಅನೇಕ ಪ್ರಶಸ್ತಿಗಳಿಗೆ ಭಾಜನವಾಗಿತ್ತು.
ಡಾ ಸರಜೂ ಕಾಟ್ಕರ್ ಅವರ ಇನ್ನೊಂದು ಕಾದಂಬರಿ ‘ದಂಗೆ’ ಚಲನಚಿತ್ರವಾಗುತ್ತಿದೆ. ಇತ್ತೀಚೆಗೆ ಪ್ರಕಟವಾಗಿರುವ ಅವರ ‘ಛತ್ರಪತಿ ಶಿವಾಜಿ The Great Maratha ‘ ಕಾದಂಬರಿಯನ್ನು ಚಲನಚಿತ್ರವನ್ನಾಗಿಸುವ ಬಗ್ಗೆ ಮಾತುಕತೆಗಳು ನಡೆದಿವೆ.
ಡಾ. ಸರಜೂ ಕಾಟ್ಕರ್
‘ಕಾವ್ಯ’ ಮಹಾಂತೇಶ ನಗರ
ಬೆಳಗಾವಿ
590017.
ಮೊಬೈಲ್ 9341029321