ಅನುವಾದಕನ ಮಾತು
ಹತ್ತಾರು ವರ್ಷಗಳ ಹಿಂದೆ ನನ್ನ ಆತ್ಮೀಯ ಸ್ನೇಹಿತರಾಗಿದ್ದ ಎಂ.ಎನ್.ರಾಯಣ್ಣವರ್ ಝೆರಾಕ್ಸ್ ಮಾಡಿಕೊಂಡು ತಂದಿದ್ದ ಒಂದಷ್ಟು ಹಾಳೆಗಳನ್ನು ನನಗೆ ನೀಡಿದರು. ಅವು ಮರಾಠಿ ಭಾಷೆಯಲ್ಲಿದ್ದ ಡಾ. ಬಾಬಾಸಾಹೇಬ ಅಂಬೇಡ್ಕರ್ರವರ ಅಪ್ರಕಟಿತ ಭಾಷಣಗಳು. ಡಾ. ಬಾಬಾಸಾಹೇಬ ಅಂಬೇಡ್ಕರ್ರ ಈ ಅಪ್ರಕಟಿತ ಭಾಷಣಗಳು ಮಹಾರಾಷ್ಟ್ರ ಸರ್ಕಾರವು ಪ್ರಕಟಿಸಿದ್ದ ಸಮಗ್ರ ಅಂಬೇಡ್ಕರ್ ಸಂಪುಟದಲ್ಲಿ ಅಡಕವಾಗಿರಲಿಲ್ಲ. ಡಾ. ಅಂಬೇಡ್ಕರ್ರು ಕಾಲಕಾಲಕ್ಕೆ ಮಾಡಿದ ಈ ಭಾಷಣಗಳು ಆ ಕಾಲದಲ್ಲಿ ಅಲ್ಲೋಲಕಲ್ಲೋಲವನ್ನೇ ಉಂಟು ಮಾಡಿದ್ದವು. ಅವರ ಭಾಷಣಗಳಿಂದ ಸನಾತನವಾದಿಗಳು ಕೃದ್ಧರಾಗುತ್ತಿದ್ದರು. ಸಾವರ್ಕರರಂತಹ ಉಗ್ರ ಹಿಂದೂವಾದಿಗಳು ಅಂಬೇಡ್ಕರ್ರ ಭಾಷಣಗಳನ್ನು ತೀವ್ರವಾಗಿ ಖಂಡಿಸುತ್ತಿದ್ದರು. ಎಂ.ಎನ್.ರಾಯಣ್ಣವರ್ರಿಗೆ ಈ ಭಾಷಣಗಳು ಕನ್ನಡದಲ್ಲಿ ಅನುವಾದಗೊಳ್ಳಬೇಕೆಂಬ ಇಚ್ಛೆ ಇತ್ತು. ಈ ಕೆಲಸವನ್ನು ಅವರು ನನಗೆ ವಹಿಸಿಕೊಟ್ಟರು. ಬಾಬಾಸಾಹೇಬರ ಈ ಭಾಷಣಗಳು ಪುಸ್ತಕರೂಪದಲ್ಲಿ ಪ್ರಕಟವಾಗಿರಲಿಲ್ಲ. ಕೆಲವು ಭಾಷಣಗಳು ಬಾಬಾಸಾಹೇಬರೇ ಸಂಪಾದಕರಾಗಿದ್ದ ಜನತಾ, ಬಹಿಷ್ಕೃತ ಭಾರತ, ಮೂಕ ನಾಯಕ ಎಂಬೀ ಪತ್ರಿಕೆಗಳಲ್ಲಿ ಪ್ರಕಟಗೊಂಡಿದ್ದವು.
ಒಂದೆರಡು ವರ್ಷಗಳಲ್ಲಿ ನಾಗಪುರದ ಪ್ರಕಾಶನ ಸಂಸ್ಥೆಯೊಂದು ಡಾ. ಬಾಬಾಸಾಹೇಬ ಅಂಬೇಡ್ಕರಾಂಚೀ ಗಾಜಲೇಲೆ ಭಾಷಣೇ ಎಂಬ ಪುಸ್ತಕವೊಂದನ್ನು ಮರಾಠಿಯಲ್ಲಿ ಪ್ರಕಟಿಸಿತು. ಸುದೈವವೆಂಬಂತೆ ಈ ಅಪ್ರಕಟಿತ ಭಾಷಣಗಳು ಈ ಕೃತಿಯಲ್ಲಿ ಪ್ರಕಟಗೊಂಡಿದ್ದವು. ಈಗ ಅವು ಕನ್ನಡಕ್ಕೆ ಬರುತ್ತಿವೆ. ಈ ಭಾಷಣಗಳ ಕನ್ನಡ ಪ್ರಕಟಣೆಯ ಕಾಲದಲ್ಲಿ ಈ ಕೆಲಸಕ್ಕೆ ಒತ್ತಾಸೆ ನೀಡಿದ್ದ ಗೆಳೆಯ ರಾಯಣ್ಣವರ್ ನಮ್ಮಲ್ಲಿಲ್ಲವೆಂಬ ವ್ಯಸನ ನನಗಿದೆ. ಅವರ ಅಭಿಮಾನಕ್ಕೆ ನಾನು ಮೌನದಲ್ಲಿಯೇ ವಂದಿಸುವೆ.
ಈ ಸಂಗ್ರಹದಲ್ಲಿ ಬಾಬಾಸಾಹೇಬರು ಆರಂಭದಲ್ಲಿ ಮಾಡಿದ ಹಲಕೆಲ ಭಾಷಣಗಳ ಜೊತೆಗೆ ಅವರು ಸಾರಾನಾಥದಲ್ಲಿ ಮಾಡಿದ ಕೊನೆಯ ಐತಿಹಾಸಿಕ ಭಾಷಣವೂ ಅಡಕವಾಗಿದೆ. ಅವರ ಮಾತುಗಳಲ್ಲಿ ಅವರಿಗೆ ದಲಿತರ ಬಗ್ಗೆ ಇದ್ದ ಕಳಕಳಿ, ಪ್ರೀತಿ ಹಾಗೂ ಅಸ್ವಸ್ಥತೆ(ಡಿesಣಟessಟಿess) ಗೊತ್ತಾಗುತ್ತದೆ. ಬೌದ್ಧ ಧರ್ಮವನ್ನು ಆಳವಾಗಿ ಅಭ್ಯಾಸ ಮಾಡಿದ ಬಾಬಾಸಾಹೇಬರು ತಮ್ಮ ಭಾಷಣಗಳಲ್ಲಿ ಅದರ ತಿರುಳನ್ನು ಹೇಳಿದ್ದಾರೆ. ಕೆಲವು ಸಂದರ್ಭಗಳಲ್ಲಿ ಬಹುಜನ ಸಮಾಜಕ್ಕೆ ಭೌತಿಕ ಲಾಭವಾಗುವಂತಿದ್ದರೆ ಕಾಂಗ್ರೆಸ್ನಂತಹ ವೈರಿಯೊಂದಿಗೂ ಒಪ್ಪಂದ ಮಾಡಿಕೊಳ್ಳಬಹುದೆಂಬ ಚಾಣಕ್ಯ ತಂತ್ರವನ್ನು ಸ್ಪಷ್ಟೀಕರಿಸುತ್ತಾರೆ. ೧೯೩೫ರ ಭಾರತ ಸರ್ಕಾರದ ಕಾಯ್ದೆಯ ಪ್ರಕಾರ ಮತದಾನದ ಹಕ್ಕು ಕೇವಲ ಪದವೀಧರರಿಗೆ ಮತ್ತು ತೆರಿಗೆಯನ್ನು ತುಂಬುವ ಧನಿಕರಿಗೆ ಮಾತ್ರ ಸೀಮಿತವಾಗಿತ್ತು. ಆದರೆ ಭಾರತದ ಸಂವಿಧಾನವನ್ನು ರಚಿಸುವಾಗ ಬಾಬಾಸಾಹೇಬರು ಭಾರತದ ಪ್ರಜೆಗಳಿಗೆಲ್ಲ ಈ ಸೌಲಭ್ಯವನ್ನು ವಿಸ್ತರಿಸಿದರಲ್ಲದೇ ವಯಸ್ಕ ಮತದಾನದ ಪದ್ಧತಿಯನ್ನು ಜಾರಿಗೆ ತಂದರು. ಔಟಿe mಚಿಟಿ, ಔಟಿe ಗಿoಣe ಚಿಟಿಜ ಔಟಿe ಗಿಚಿಟue ಇದು ಬಾಬಾಸಾಹೇಬರು ಭಾರತದ ಪ್ರಜಾಪ್ರಭುತ್ವಕ್ಕೆ ನೀಡಿದ ಮಹಾನ್ ಕೊಡುಗೆ. ಬಾಬಾಸಾಹೇಬರು ಬರೀ ದಲಿತ ಜನಾಂಗದ ನಾಯಕರಾಗಿರಲಿಲ್ಲ. ಅವರಿಲ್ಲದಿದ್ದಿದ್ದರೆ ಹಿಂದುಳಿದ ವರ್ಗಗಳಿಗೆ ಸೇರಿದ ಕಲ್ಯಾಣಸಿಂಗ್, ಉಮಾಭಾರತಿ, ಕರ್ಪೂರಿ ಠಾಕುರ, ದೇವರಾಜ ಅರಸು, ಬಂಗಾರಪ್ಪ, ಮೊಯ್ಲಿ, ಸಿದ್ಧರಾಮಯ್ಯ ಮುಂತಾದವರು ಮುಖ್ಯಮಂತ್ರಿಗಳಾಗುತ್ತಿರಲಿಲ್ಲ.
ಬಾಬಾಸಾಹೇಬರ ಈ ಭಾಷಣಗಳನ್ನು ತುಂಬ ಶ್ರದ್ಧೆಯಿಂದ, ಪ್ರೀತಿಯಿಂದ, ಅಭಿಮಾನದಿಂದ ನಾನು ಕನ್ನಡಕ್ಕೆ ಅನುವಾದಿಸಿದ್ದೇನೆ. ಹೊಸಪೇಟೆಯ ಯಾಜಿ ಪ್ರಕಾಶನದ ಗಣೇಶ ಯಾಜಿ ಮತ್ತು ಸವಿತಾ ಯಾಜಿ ಅಷ್ಟೇ ಪ್ರೀತಿ, ಅಭಿಮಾನಗಳಿಂದ ಬಹುಸುಂದರವಾಗಿ ಅಚ್ಚು ಹಾಕಿದ್ದಾರೆ. ಗಣೇಶ ಯಾಜಿ ಮತ್ತು ಪ್ರಕಾಶನದ ಒಡತಿ ಸವಿತಾ ಯಾಜಿ ಅವರಿಗೆ ನನ್ನ ಕೃತಜ್ಞತೆಗಳು ಸಲ್ಲುತ್ತವೆ.
ಬಾಬಾಸಾಹೇಬರ ಈ ಅಪ್ರಕಟಿತ ಭಾಷಣಗಳ ಬಗ್ಗೆ ದೇವನೂರ ಮಹಾದೇವ, ಸಿದ್ಧಲಿಂಗಯ್ಯ, ಅರವಿಂದ ಮಾಲಗತ್ತಿ, ಕಾಳೇಗೌಡ ನಾಗವಾರ, ಅರ್ಜುನ ಗೊಳಸಂಗಿ, ಕುಂ.ವೀರಭದ್ರಪ್ಪ, ರಾಘವೇಂದ್ರ ಪಾಟೀಲ, ಬರಗೂರ ರಾಮಚಂದ್ರಪ್ಪ, ಎಂ.ಎಂ.ಕಲಬುರ್ಗಿ, ಗುರುಲಿಂಗ ಕಾಪಸೆ, ಚಂದ್ರಶೇಖರ ಕಂಬಾರ ಮುಂತಾದ ಪ್ರಭೃತಿಗಳಿಗೆ ಹೇಳಿದಾಗ ಅವರೆಲ್ಲ ಥ್ರಿಲ್ರಾಗಿ ಆದಷ್ಟು ಬೇಗ ಕೃತಿ ಹೊರಗೆ ಬರಲಿಯೆಂದು ಹಾರೈಸಿದರು. ಇವರೆಲ್ಲರಿಗೆ ನನ್ನ ಕೃತಜ್ಞತೆಗಳು ಸಲ್ಲುತ್ತವೆ.
ಗೆಳೆಯರಾದ ಸತೀಶ ಕುಲಕರ್ಣಿ, ಮನು ಬಳಿಗಾರ, ರಾಮಕೃಷ್ಣ ಮರಾಠೆ, ರವಿ ಕೋಟಾರಗಸ್ತಿ, ಎಂ.ಕೆ.ಜೈನಾಪುರ, ಎ.ಬಿ.ಘಾಟಗೆ, ಶಿವರುದ್ರ ಕಲ್ಲೋಳಿಕರ್, ಅರವಿಂದ ಮೂಲಿಮನಿ, ಮಹಾಂತೇಶ ಚಲವಾದಿ, ಸುಬ್ರಾವ ಎಂಟೆತ್ತಿನವರ, ಅಶೋಕ ಐನಾವರ ಅವರ ಪ್ರೀತಿಗೆ ನನ್ನ ನೆನಕೆಗಳು.
ಪತ್ನಿ ಸುಮಾ, ಮಕ್ಕಳಾದ ಸಂಸ್ಕೃತಿ ರಾಕೇಶ ರಾಮಗಡ ಹಾಗೂ ಶ್ರೇಯಸ್ ಅವರುಗಳ ಅದಮ್ಯ ಪ್ರೀತಿಗೆ ಕೃತಜ್ಞತೆಗಳು.
–ಸರಜೂ ಕಾಟ್ಕರ್
ನಾಲ್ಕನೆಯ ಆವೃತ್ತಿಗೆ ಒಂದೆರಡು ಮಾತು
ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಸುಪ್ರಸಿದ್ಧ ಭಾಷಣಗಳು’ ಇದೀಗ ನಾಲ್ಕನೆಯ ಆವೃತ್ತಿಯಾಗಿ ಪ್ರಕಟವಾಗುತ್ತಿದೆ. ಮೊದಲನೆಯ ಆವೃತ್ತಿ ೨೦೧೪ರಲ್ಲಿ ಪ್ರಕಟವಾಗಿ ಕೇವಲ ಎರಡೇ ಎರಡು ತಿಂಗಳಲ್ಲಿ ಕೃತಿಯ ಎರಡನೇ ಆವೃತ್ತಿ ಪ್ರಕಟವಾಗಿತ್ತು. ಇದು ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಬರಹಗಳಿಗೆ ಓದುಗರಿಂದ ದೊರೆತ ಪ್ರೀತಿ, ಅಭಿಮಾನ ಮತ್ತು ಗೌರವವೆಂದು ಹೇಳಬಹುದು. ಕೃತಿಯ ಮೂರನೆಯ ಆವೃತ್ತಿಯು ಜುಲೈ ೨೦೧೯ರಲ್ಲಿ ಪ್ರಕಟವಾಯಿತು. ಈಗ ಕೃತಿಯ ನಾಲ್ಕನೆಯ ಆವೃತ್ತಿ ಪ್ರಕಟವಾಗುತ್ತಿರುವುದಕ್ಕೆ ಸಹಜವಾಗಿಯೇ ನನಗೆ ಸಂತೋಷವಾಗುತ್ತಿದೆ.
ಬಾಬಾಸಾಹೇಬರು ಕೇವಲ ದಲಿತರಿಗಷ್ಟೇ ಮೀಸಲಾತಿಯನ್ನು ಕೊಡಲಿಲ್ಲ. ಅವರು ಭಾರತದ ಎಲ್ಲ ಹಿಂದುಳಿದವರಿಗೆ, ಶೂದ್ರರಿಗೆ ಮತ್ತು ಸಣ್ಣ ಸಣ್ಣ ಕಮ್ಯೂನಿಟಿಗಳಿಗೆ ಮೀಸಲಾತಿಯನ್ನು ಕಲ್ಪಿಸಿದರು. ಬಾಬಾಸಾಹೇಬರು ಕೊಟ್ಟ ಮೀಸಲಾತಿಯನ್ನು ಇಂದು ಬ್ರಾಹ್ಮಣರಿಂದ ಹಿಡಿದು ದಲಿತರವರೆಗೆ ಎಲ್ಲರೂ ಅನುಭವಿಸುತ್ತಿದ್ದಾರೆ. ಇಂದು ರಾಜ್ಯಾಡಳಿತ ನಡೆಸುತ್ತಿರುವ ರಾಜಕಾರಣಿಗಳು, ಅಧಿಕಾರಿಗಳು ಡಾ. ಬಾಬಾಸಾಹೇಬ ಅವರು ರಚಿಸಿದ ಸಂವಿಧಾನದ ಫಲಾನುಭವಿಗಳೇ ಆಗಿದ್ದಾರೆ.
ಮೈಕ್ರೋ ಕಮ್ಯೂನಿಟಿಗಳಿಗೆ ಡಾ ಬಾಬಾಸಾಹೇಬ ಅಂಬೇಡ್ಕರ್ ಅವರು ಮೀಸಲಾತಿಯನ್ನು ನೀಡದೇ ಹೋಗಿದ್ದರೆ, ಘಾಚಿ ಜಾತಿಯ (ಕರ್ನಾಟಕದಲ್ಲಿ ಗಾಣಿಗರು) ಶ್ರೀ ನರೇಂದ್ರ ಮೋದಿ ಅವರು ಇಂದು ಪ್ರಧಾನಿ ಪಟ್ಟಕ್ಕೆ ಏರುತ್ತಿರಲಿಲ್ಲ. ಬುಡಕಟ್ಟು ಜನಾಂಗದ ಶ್ರೀಮತಿ ದ್ರೌಪದಿ ಮುರ್ಮು ಅವರು ರಾಷ್ಟ್ರಪತಿಯಾಗುತ್ತಿರಲಿಲ್ಲ.
ಈ ದೇಶದಲ್ಲಿ ಅನೇಕ ಜಾತಿ ಮತ್ತು ಧರ್ಮಗಳಿದ್ದರೂ ದೇಶದ ಪ್ರಜಾಪ್ರಭುತ್ವದ ಅಡಿಪಾಯ ಡಾ. ಬಾಬಾಸಾಹೇಬರು ರೂಪಿಸಿದ ಸಂವಿಧಾನವೇ ಆಗಿದೆ. ಈ ಸಂವಿಧಾನದೆದುರು ಭಾರತದ ಪ್ರಜೆಗಳೆಲ್ಲರೂ ಸಮಾನರು. ಸಂವಿಧಾನದೆದುರು ರಾಷ್ಟ್ರಪತಿಯವರಿಗೆ ಇರುವಷ್ಟೇ ಹಕ್ಕು ಮತ್ತು ಅವಕಾಶ ಕಸಗುಡಿಸುವ ಒಬ್ಬ ಕಾರ್ಮಿಕನಿಗೂ ಇದೆ. ಸಂವಿಧಾನವೇ ಭಾರತದ ಧರ್ಮಗ್ರಂಥವಾಗಿದೆ.
ಈ ಕೃತಿಯ ಮೊದಲನೆಯ, ಎರಡನೆಯ ಮತ್ತು ಮೂರನೆಯ ಆವೃತ್ತಿಯನ್ನು ಪ್ರಕಟಿಸಿದ ಹೊಸಪೇಟೆಯ ಯಾಜಿ ಪ್ರಕಾಶನವು ನಾಲ್ಕನೆಯ ಆವೃತ್ತಿಯನ್ನೂ ಪ್ರಕಟಿಸುತ್ತಿದ್ದಾರೆ. ಯಾಜಿ ಪ್ರಕಾಶನದ ಸವಿತಾ ಯಾಜಿ ಅವರಿಗೆ ಹಾಗೂ ಗೆಳೆಯ ಗಣೇಶ ಯಾಜಿ ಅವರಿಗೆ ಕೃತಜ್ಞನಾಗಿದ್ದೇನೆ.
ಡಾ. ಸರಜೂ ಕಾಟ್ಕರ್
ಪುಟ ತೆರೆದಂತೆ…
ಸವಿನುಡಿ / ೫
ಅನುವಾದಕನ ಮಾತು / ೭
ಎಡನೆಯ ಆವೃತ್ತಿಗೆ ನಾಲ್ಕು ಮಾತು / ೯
ನಾಲ್ಕನೆಯ ಆವೃತ್ತಿಗೆ ನಾಲ್ಕು ಮಾತು / ೧೧
೧. ನನ್ನ ಜೀವನದ ತತ್ವಜ್ಞಾನ / ೧೫
೨. ನಮ್ಮ ರಕ್ತ ಹರಿಸಿಯಾದರೂ ನಾವು ನಮ್ಮ ಗುರಿಯನ್ನು ಮುಟ್ಟುತ್ತೇವೆ / ೧೭
೩. ವಿದ್ಯೆಯ ಹೊರತು ರಾಜಕಾರಣ ಸಾಧ್ಯವಿಲ್ಲ / ೨೩
೪. ಭಾರತೀಯರೆಲ್ಲರೂ ಬೌದ್ಧ ಧರ್ಮ ಸ್ವೀಕರಿಸಬೇಕು / ೨೫
೫. ನಾವೇಕೆ ಧರ್ಮಾಂತರ ಮಾಡಲು ಇಚ್ಛಿಸುತ್ತೇವೆ? / ೩೦
೬ ದೇಶಾಂತರ, ನಾಮಾಂತರ ಅಥವಾ ಧರ್ಮಾಂತರ / ೪೭
೭ ಎಲ್ಲ ಭೇದಗಳನ್ನು ಬಿಟ್ಟು ಒಂದಾಗಿ / ೫೧
೮. ಮಹಾತ್ಮಾ ಜ್ಯೋತಿಬಾ ಫುಲೆ ಅವರ ತತ್ವಗಳನ್ನು ಅನುಸರಿಸಿರಿ / ೫೨
೯ ಸ್ವಾಭಿಮಾನ ಜೋಪಾನವಾಗಿರಲಿ / ೫೫
೧೦. ಪಶುಗಳಂತೆ ಜೀವಿಸದೇ ಮಾನವರಂತೆ ಜೀವಿಸಿರಿ / ೫೭
೧೧. ನಮ್ಮ ಉದ್ಧಾರ ನಾವೇ ಮಾಡಿಕೊಳ್ಳಬೇಕು / ೫೯
೧೨. ಬೌದ್ಧ ಧರ್ಮವೇ ನಿಜವಾದ ಸಮಾನತೆಯ ಧರ್ಮ / ೬೩
೧೩. ಬೌದ್ಧ ಧರ್ಮದ ಪುನರುತ್ಥಾನ ಮಾಡಬೇಕಾಗಿದೆ / ೬೫
೧೪. ಭಾರತದಲ್ಲಿ ಬೌದ್ಧಧರ್ಮ ಏಕೆ ಲೋಪವಾಯಿತು? / ೬೮
೧೫. ಎಲ್ಲ ಅನಿಷ್ಟಗಳನ್ನು ಬೌದ್ಧ ಧರ್ಮ ನಾಶಪಡಿಸುತ್ತದೆ / ೭೨
೧೬. ರಾಜಕೀಯ ಹಕ್ಕು ಪಡೆಯುವುದೇ ನಮ್ಮ ಧ್ಯೇಯವಾಗಬೇಕು / ೭೫
೧೭. ನಿಮ್ಮ ಮಕ್ಕಳಿಗೆ ಶಿಕ್ಷಣವನ್ನು ಕೊಡಲು ಹಿಂಜರಿಯಬೇಡಿರಿ / ೭೮
೧೮. ಈ ದೇಶವನ್ನು ನಾವೇ ಆಳುತ್ತೇವೆ / ೮೦
೧೯. ದಲಿತರೇ ರಾಜಸತ್ತೆಯ ತಕ್ಕಡಿಯಲ್ಲಿ ನಿಮ್ಮ ಶಕ್ತಿ ಪ್ರದರ್ಶಿಸಿ / ೮೨
೨೦. ವಿರೋಧಕ್ಕಾಗಿಯೇ ವಿರೋಧ ನನಗೆ ಒಪ್ಪಿಗೆ ಇಲ್ಲ / ೮೫
೨೧. ಸಾಮಾಜಿಕ ಉನ್ನತಿಯ ಮುಖ್ಯಮಾರ್ಗ ರಾಜಕೀಯ ಶಕ್ತಿ / ೮೭
೨೨. ಬೌದ್ಧ ಧರ್ಮದ ಉದಯ ಹಾಗೂ ಅಸ್ತ / ೯೦
೨೩. ನಿಮ್ಮ ಗುಡಿಸಲು ಬಿಟ್ಟು ಅನ್ಯರ ಅರಮನೆಗೆ ಹೋಗಬೇಡಿರಿ / ೯೫
೨೪. ಇಂದು ದಿಲ್ಲಿ ಪಾರ್ಲಿಮೆಂಟಿನಲ್ಲಿ ಅಸ್ಪೃಶ್ಯ ಮಂತ್ರಿಗಳನ್ನು ಕಾಣುತ್ತಿದ್ದೇವೆ / ೯೯
೨೫. ಭಾಷಾವಾರು ಪ್ರಾಂತ ರಚನೆ / ೧೦೧
೨೬. ಪಂಢರಪುರದ ದೇವಸ್ಥಾನವು ಬುದ್ಧನ ದೇವಸ್ಥಾನವಾಗಿತ್ತು / ೧೦೩
೨೭. ಬುದ್ಧ ಧರ್ಮದ ಪುನರುತ್ಥಾನ / ೧೦೬
೨೮. ಭೂತಗಳಿಂದ ತುಂಬಿದ ಗುಡಿಗಳನ್ನು ನಾಶಪಡಿಸಲೇ ಬೇಕು / ೧೧೨
೨೯. ಡಾ. ಬಾಬಾಸಾಹೇಬರ ಕೊನೆಯ ಭಾಷಣ / ೧೧೪
Reviews
There are no reviews yet.