ಡಾ. ಕೆ ಪಿ ಲಲಿತಾ ಅವರ ’ವಿವಕ್ಷಾ’: ಒಂದು ಭರವಸೆಯ ಜಾಡು
ಡಾ. ಕೆ.ಪಿ. ಲಲಿತಾ ಅವರು ಕನ್ನಡ ಮತ್ತು ಜಾನಪದ ಉಭಯ ಶಿಸ್ತುಗಳಲ್ಲಿ ಸಾಕಷ್ಟು ಪರಿಶ್ರಮ ಮತ್ತು ಪರಿಣತಿಯನ್ನು ಸಾಧಿಸಿರುವ ಅಧ್ಯಾಪಕರು ಮತ್ತು ಸಂಶೋಧಕರು. ಈಗಾಗಲೇ ಹನ್ನೊಂದು-ಹನ್ನೆರಡು ವರ್ಷಗಳ ಬೋಧನೆ ಮತ್ತು ಸಂಬಂಧಿಸಿದ ಅಧ್ಯಯನ ಗಳಿಂದ ಅವರ ಚಿಂತನೆ ಹದಗೊಂಡಿದೆ; ಅಭಿವ್ಯಕ್ತಿ ಮೊನಚು ಸಾಧಿಸಿದೆ. ಸದಾ ಉಸ-ಉತ್ಸಾಹಗಳಿಂದ ಕೂಡಿದ; ಸಕಾರಾತ್ಮಕತೆಯತ್ತ ಮುಖಮಾಡಿದ ಕ್ರಿಯಾಶೀಲ ವ್ಯಕ್ತಿತ್ವ ಅವರದು. ಸಂಸ್ಕೃತಿ ಅಧ್ಯಯನ ಮತ್ತು ಸಂಶೋಧನೆ ಅವರ ಆಸಕ್ತಿಯ ಕ್ಷೇತ್ರ. ಹೆಚ್ಚು ಪರಿಶ್ರಮಾಪೇಕ್ಷಿಯೂ; ಅಷ್ಟೊಂದು ಜನಪ್ರಿಯವಲ್ಲದ್ದೂ ಆದ ಸಂಶೋಧನೆಯ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳುವವರು ತುಂಬ ಕಡಿಮೆ. ಡಾ. ಲಲಿತ ಅವರು ಈ ವಿಷಯದಲ್ಲಿ ತುಂಬ ವಿಭಿನ್ನ. ಖಾಯಂ ಕೆಲಸ, ತುಂಬ ಅನುಕೂಲಸ್ಥ ಮನೆತನ, ಆರಾಮದಾಯಕ ಜೀವನಕ್ಕೆ ಏನೆಲ್ಲ ಅವಕಾಶಗಳಿದ್ದರೂ; ಅವುಗಳಿಂದ ಆದಷ್ಟು ದೂರವಿದ್ದು eನದ ಗುಂಗು ಹಿಡಿಸಿಕೊಂಡಿರುವುದು ತುಂಬ ವಿಶೇಷ. ಮನೆ, ಮಕ್ಕಳು, ಸಂಸಾರ, ಕಾಲೇಜು ಇಷ್ಟೆಲ್ಲ ಜವಾಬ್ದಾರಿಯಿರುವಾಗ ಹೆಚ್ಚಿನ ಓದು ಬರಹ ಸಂಶೋಧನೆಯ ಕಷ್ಟ ಏಕೆ? ಎಂದು ಮನೆಯವರು, ನೆಂಟರಿಷ್ಟರು ಕೇಳಿದರೆ ’ನನ್ನತನವನ್ನು ಕಂಡುಕೊಳ್ಳುವುದಕ್ಕೆ’ ಎಂಬ ಅವರ ಒಗಟಿನ ಸ್ವರೂಪದ ಉತ್ತರವನ್ನು ಗಮನಿಸಿದರೆ ಡಾ. ಲಲಿತಾ ಅವರ ಸಂಶೋಧನೆಯ ಅನನ್ಯ ಪ್ರೇರಣೆ ಮತ್ತು ಶ್ರೇಷ್ಠಮಟ್ಟದ ಶೈPಣಿಕ ಅಭಿರುಚಿ ಅಚ್ಚರಿ-ಅಭಿಮಾನ ಮೂಡಿಸುತ್ತವೆ.
ಡಾ. ಕೆ.ಪಿ. ಲಲಿತಾ ಕೊಡಗಿನ ಚೈತನ್ಯಶೀಲ ಪ್ರತಿಭೆ. ಕೊಡಗಿನ ಭೌಗೋಳಿಕತೆ ಮಾತ್ರವೆ ಸಮೃದ್ಧವಾಗಿಲ್ಲ; ಅಲ್ಲಿಯ ಜನಸಮುದಾಯಗಳು; ಅವರ ಭಾಷೆ-ಸಾಹಿತ್ಯ-ಸಂಸ್ಕೃತಿ ಕೂಡ ವೈವಿಧ್ಯಮಯವಾಗಿವೆ; ಸಮೃದ್ಧವಾಗಿವೆ; ಮತ್ತು ವಿಶಿಷ್ಟವಾಗಿವೆ. ಇವನ್ನು ಸಮಗ್ರವಾಗಿ ಅಧ್ಯಯನ ಮಾಡುವ; ಸಂಗ್ರಹಿಸುವ; ವಿಶ್ಲೇಷಿಸುವ ಮತ್ತು ಸಹೃದಯ ಲೋಕಕ್ಕೆ ತಿಳಿಸಿ ಹೇಳುವ ಹಂಬಲ ಅವರದು. ಈ ಹಿನ್ನೆಲೆಯಲ್ಲಿ ಬರೆಯಲೇಬೇಕೆಂಬ ತೀವ್ರ ಒತ್ತಡದಲ್ಲಿ; ಪ್ರಾಮಾಣಿಕ ಪರಿಶ್ರಮದ ಅಧ್ಯಯನ ಮತ್ತು ಕ್ಷೇತ್ರಾಧ್ಯಯನದ ಆಧಾರದಲ್ಲಿ ಮೂಡಿಬಂದಿವೆ ಇಲ್ಲಿನ ಲೇಖನಗಳು.
ವಸಾಹತು ವ್ಯವಸ್ಥೆಯ ಸಂದರ್ಭದಿಂದಲೂ ಕೊಡಗಿನ ಇತಿಹಾಸ ಭಾಷೆ-ಪರಂಪರೆ-ಸಂಸ್ಕೃತಿಯನ್ನು ಅಧ್ಯಯನ ಮಾಡುವ ಪ್ರಯತ್ನಗಳು ನಡೆಯುತ್ತ ಬಂದಿವೆ. ವಿದೇಶಿ ವಿದ್ವಾಂಸರು, ದೇಸಿ ವಿದ್ವಾಂಸರು ಈ ವಿಷಯದಲ್ಲಿ ನಡೆಸಿದ ಅಧ್ಯಯನಗಳನ್ನು ಡಾ. ಲಲಿತಾ ಅವರು ಗಮನಿಸಿzರೆ ಮತ್ತು ಇವುಗಳ ಮುಂದುವರಿಕೆಯಾಗಿ ವಿಭಿನ್ನ ಜಾಡಿನಲ್ಲಿ ಸಾಗಬೇಕಾದುದನ್ನು ಗುರುತಿಸಿಕೊಂಡಿzರೆ. ಹೀಗಾಗಿ ಲಲಿತಾ ಅವರ ಇಲ್ಲಿನ ಬರವಣಿಗೆ ಗಳು ಗಮನ ಸೆಳೆಯುತ್ತವೆ. ವೈಶಿಷ್ಟ್ಯಪೂರ್ಣ ಅನ್ನಿಸುತ್ತವೆ.
ಕೊಡಗಿನ ವಿವಿಧ ಪ್ರದೇಶದ, ವಿವಿಧ ಜನಸಮುದಾಯಗಳ ಸಾಹಿತ್ಯ-ನಂಬಿಕೆ-ಸಂಪ್ರದಾಯ-ಆಚರಣೆಗಳನ್ನು ಅಧ್ಯಯನ ಮಾಡಲು ಪೂರಕವಾದ ಪೂರ್ವಸಾಹಿತ್ಯದ ಅಧ್ಯಯನದ ಜೊತೆಗೆ ವ್ಯಾಪಕವಾದ ಕ್ಷೇತ್ರಕಾರ್ಯವನ್ನು ಕೈಗೊಂಡು ಸಾಕಷ್ಟು ಮಾಹಿತಿ ಸಂಗ್ರಹಿಸಿ; ಅದನ್ನು ಜನಾಂಗ, ಭಾಷೆ, ಸಾಹಿತ್ಯ, ಇತಿಹಾಸ, ಮಹಿಳಾ ಸಂವೇದನೆ, ನಂಬಿಕೆ-ಸಂಪ್ರದಾಯ, ಆಚರಣೆಗಳ ನೆಲೆಯಲ್ಲಿ ಅತ್ಯಂತ ಸೂಕ್ಷ್ಮವಾಗಿ ವಿಶ್ಲೇಷಣೆ ಮಾಡುವ ಸೂಕ್ತ ವೈಧಾನಿಕತೆಯಿಂದ ಇಲ್ಲಿನ ಬರವಣಿಗೆ ರೂಪುಗೊಂಡಿದೆ.
ಡಾ. ಲಲಿತಾ ಅವರ ಚಿಂತನೆ ಮತ್ತು ಬರವಣಿಗೆ ಕೇವಲ ವಿಷಯದ ಮೇಲ್ಪದರದಲ್ಲಿ ಮಾತ್ರವೆ ನಡೆಯದೆ; ವಿಷಯದ ಆಳ-ವಿಸ್ತಾರ-ಸೂಕ್ಷ್ಮಗಳನ್ನು ಗ್ರಹಿಸುವ, ವಿಶ್ಲೇಷಿಸುವ ಮತ್ತು ಖಚಿತ ಸ್ವರೂಪದಲ್ಲಿ ಅದನ್ನು ಅಭಿವ್ಯಕ್ತಿಸುವ ಬಹು ಆಯಾಮದಲ್ಲಿ; ತೂಕದಲ್ಲಿ ನಡೆಯುತ್ತದೆ. ಕೊಡಗಿನ ಸಂಸ್ಕೃತಿ ಎಂದರೆ ಕೇವಲ ಇಲ್ಲಿ ಪ್ರಮುಖವಾಗಿ ಕಂಡುಬರುವ ವೀರರ, ಶೂರರ, ವಿದ್ಯಾವಂತರ ಜಮೀನುದಾರ-ಶ್ರೀಮಂತರ ಸಂಸ್ಕೃತಿ ಮಾತ್ರವಲ್ಲ; ಇಲ್ಲಿಯ ವಿವಿಧ ಪ್ರದೇಶಗಳಲ್ಲಿ ವಾಸವಾಗಿರುವ ಸುಮಾರು ಹದಿನಾರು ಬಗೆಯ ಬುಡಕಟ್ಟು ಸಮುದಾಯಗಳನ್ನು ಒಳಗೊಂಡಿದೆ ಎಂಬ ವಾಸ್ತವ ಸಂಗತಿಯನ್ನು ಡಾ. ಲಲಿತಾ ಅವರು ಸಂದರ್ಭ ಬಂದಾಗಲೆಲ್ಲ ಒತ್ತಿ ಒತ್ತಿ ಹೇಳುತ್ತಾರೆ. ಮತ್ತು ಆಯ್ದ ವಿಷಯವನ್ನು ವಿಶ್ಲೇಷಿಸುವಾಗ ಯಾವುದೇ ಒಂದು ಭಾಗ, ಒಂದು ಸಮುದಾಯಕ್ಕೆ ತಮ್ಮ ದೃಷ್ಟಿಯನ್ನು ಸೀಮಿತ ಮಾಡಿಕೊಳ್ಳದೆ; ವಿವಿಧ ಪ್ರದೇಶ, ಜನಸಮುದಾಯಗಳಿಗೆ ಅದನ್ನು ವಿಸ್ತರಿಸಿ ಸೂಕ್ಷ್ಮ ವ್ಯತ್ಯಾಸಗಳನ್ನು ಗುರುತಿಸುತ್ತಾರೆ.
ಡಾ. ಲಲಿತಾ ಅವರ ಬರವಣಿಗೆಯ ಮತ್ತೊಂದು ಮುಖ್ಯ ಗುಣವೆಂದರೆ ರೂಢಿಗತವಾಗಿ ಬಂದ ಅಭಿಪ್ರಾಯ, ತೀರ್ಮಾನಗಳನ್ನು ವಸ್ತುನಿಷ್ಠ ನೆಲೆಯಲ್ಲಿ ಮರುಚಿಂತನೆಗೆ ಒಳ ಪಡಿಸುವುದು. ಇದರಿಂದ ವಿಷಯದ ಮತ್ತೊಂದು ಮಗ್ಗಲನ್ನು ಕಾಣಲು ಅವರಿಗೆ ಸಾಧ್ಯವಾಗಿದೆ. ಉದಾಹರಣೆಗೆ ಕೊಡಗಿನ ಸಂಸ್ಕೃತಿಗೆ ಸಂಬಂಧಿಸಿದ, ಆಚಾರ್ಯ ಕೃತಿ ಎನಿಸಿಕೊಂಡ ’ಪಟ್ಟೋಲೆ ಪಳಮೆ’ ಕುರಿತು ಪಟ್ಟೋಲೆ ಪಳಮೆ ಗ್ರಂಥವನ್ನು ಕೊಡವರ ಅಥವಾ ಕೊಡವ ಸಂಸ್ಕೃತಿಯ ಪ್ರಾತಿನಿಧಿಕ ಗ್ರಂಥವೆಂದು ಒಪ್ಪಿಕೊಳ್ಳುವ ಮೊದಲು ಸ್ವಲ್ಪ ಆಲೋಚನೆ ಮಾಡಬೇಕಾಗುತ್ತದೆ. ಏಕೆಂದರೆ ಈ ಗ್ರಂಥದಲ್ಲಿ ದಾಖಲಾಗದೆ ಇರುವ ಇನ್ನೂ ಅನೇಕ ಜಾನಪದ ಸಂಗತಿಗಳು, ಸಂಪ್ರದಾಯಗಳು ಸ್ಥಳೀಯ ಜನಪದದಲ್ಲಿ ಹೇರಳವಾಗಿವೆ. ಆದರೆ ಚಿಣ್ಣಪ್ಪನವರು ತಮಗಿದ್ದ ಇತಿಮಿತಿಯಲ್ಲಿ ಹೊರಗಿನ ಸಂಸ್ಕೃತಿಯ ಕುರುಹುಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಯಾವುದೆ ಪ್ರತಿಫಲಾಪೇಕ್ಷೆಯಿಲ್ಲದೆ ತಮ್ಮ ಕೈಲಾದ ಪ್ರಯತ್ನವನ್ನು ಪ್ರಾಮಾಣಿಕವಾಗಿ ಮಾಡಿzರೆ ಎಂಬುದು ಅತ್ಯಂತ ಹೆಮ್ಮೆಯ ವಿಷಯ ಎಂಬ ಅಭಿಪ್ರಾಯವನ್ನು ಗಮನಿಸಿದರೆ ಡಾ. ಲಲಿತಾ ಅವರ ಅಧ್ಯಯನಶೀಲತೆ, ಸ್ವತಂತ್ರ ನಿಲುವು, ನಿಷ್ಪPಪಾತ ದೃಷ್ಟಿ ಎದ್ದು ಕಾಣುತ್ತವೆ.
ಕೊಡವ ಭಾಷೆಯ ಗಾದೆಗಳನ್ನು ವಿಶ್ಲೇಷಿಸುವ ಸಂದರ್ಭದಲ್ಲಿ ಆ ಭಾಷೆಯ ಗಾದೆ ನುಡಿಯ ಪಕ್ಕದಲ್ಲಿಯೆ ಕನ್ನಡ ಅನುವಾದವನ್ನು ಕೊಟ್ಟಿರುವುದು ಸಂವಹನದ ದೃಷ್ಟಿಯಿಂದ ಅನುಕೂಲಕರವಾಗಿದೆ. ಕೊಡಗಿನ ಜಾನಪದ ಆಚರಣೆಗಳನ್ನು ವಿಶ್ಲೇಷಿಸುವ ಸಂದರ್ಭದಲ್ಲಿ ಲೇಖಕಿಯು ಗುರುತಿಸುವ ಜನಪದದ ವೈeನಿಕ ಮನೋಧರ್ಮ ಆಚರಣೆಗಳನ್ನು ತುಂಬ ಗಂಭೀರವಾಗಿ ಪರಿಗಣಿಸಬೇಕು ಎಂಬುದನ್ನು ನೆನಪಿಸುವಂತಿದೆ. ’ಕೊಡಗಿನ ಜಾನಪದದಲ್ಲಿ ಮಹಿಳೆ’ ಲೇಖನ ಪ್ರೌಢಸ್ವರೂಪzಗಿದೆ. ಕೊಡಗಿನ ಐತಿಹ್ಯಗಳನ್ನು ವಿಶ್ಲೇಷಿಸುವ ಸಂದರ್ಭದಲ್ಲಿ ಬರುವ ಟಿಪ್ಪುವಿನ ಇತಿಹಾಸ ಕುರಿತ ಸಂಶೋಧಕರ ಅಧ್ಯಯನಶೀಲತೆ, ಜಿeಸೆ, ವಸ್ತುನಿಷ್ಠತೆ ಗಮನ ಸೆಳೆಯುವಂತಿವೆ.
ಒಟ್ಟಾರೆಯಾಗಿ ಸಮಗ್ರ ದೃಷ್ಟಿಕೋನ, ಅಧ್ಯಯನದ ಹರಹು ಸಂಶೋಧನೆಯ ಶಿಸ್ತಿನಿಂದಾಗಿ ಇಲ್ಲಿಯ ಲೇಖನಗಳು ಗಟ್ಟಿಯಾಗಿವೆ. ವಿಚಾರಗಳಲ್ಲಿರುವ ಖಚಿತತೆಯಿಂದಾಗಿ ಬರವಣಿಗೆ ಸ್ಪಷ್ಟವಾಗಿದೆ. ಎಲ್ಲಿಯೂ ಗೊಂದಲ ಅಸ್ಪಷ್ಟತೆ ಕಾಣುವುದಿಲ್ಲ. ಬದಲಾಗಿ ಲವಲವಿಕೆಯಿಂದ ಅದು ಪರಿಪ್ಲುತವಾಗಿರುವುದರಿಂದ ಓದಿಸಿಕೊಳ್ಳುವ ಗುಣವನ್ನು ಹೊಂದಿದೆ. ಸಂಶೋಧನೆಗೆ ಬೇಕಾದ ಕುತೂಹಲ, ಜಿeಸೆ, ಅಧ್ಯಯನದ ಪರಿಶ್ರಮ, ವಿಶ್ಲೇಷಣೆಯ ತೀಕ್ಷ್ಣತೆ, ಅಭಿವ್ಯಕ್ತಿಯ ಮೊನಚು ಡಾ. ಲಲಿತಾ ಅವರಿಗೆ ಹಸ್ತಗತ, ಬುದ್ಧಿ ಗತವಾಗಿರುವುದರಿಂದ; ಕನ್ನಡ ಮತ್ತು ಜಾನಪದ ಈ ಎರಡೂ ವಿಷಯಗಳ ತಮಗೆ ಪ್ರಿಯವಾದ ಕ್ಷೇತ್ರದಲ್ಲಿ ಅವರು ಗುಣಮಟ್ಟದ ಸಂಶೋಧನೆಯನ್ನು ನಡೆಸಬಲ್ಲರೆಂಬುದನ್ನು ಅವರ ಇಲ್ಲಿಯ ಬರಹಗಳು ನಿರೂಪಿಸುತ್ತವೆ. ಈ ಹಿನ್ನೆಲೆಯಲ್ಲಿ ಈ ಭರವಸೆಯ ಸಂಶೋಧಕರಿಂದ ಮುಂದಿನ ದಿನಗಳಲ್ಲಿ ಇನ್ನೂ ಅನೇಕ ಮೌಲಿಕ ಕೃತಿಗಳು ಹೊರಬರಲಿ.
ಪ್ರೊ. ನೀಲಗಿರಿ ತಳವಾರ
ಮನದ ಮಾತು
ವಿಶ್ವದ ಅನೇಕ ದಾರ್ಶನಿಕರು, ಸಮಾಜ ಸುಧಾರಕರು ಹಲವಾರು ವರ್ಷಗಳ ಹಿಂದೆ ಭಾರತದ ಹದಗೆಟ್ಟ ಸಾಮಾಜಿಕ ಹಾಗೂ ಆರ್ಥಿಕ ಪರಿಸ್ಥಿಗಳನ್ನು ಕುರಿತಂತೆ ನೀಡಿದ ಅನೇಕ ಕಾರಣಗಳಲ್ಲಿ ಪ್ರಮುಖವಾದ ಎರಡು ಕಾರಣಗಳೆಂದರೆ; ಒಂದು ಭಾರತದ ಸಾಮಾಜಿಕ ವ್ಯವಸ್ಥೆಯಲ್ಲಿದ್ದ ಜಾತೀಯತೆ, ಮತ್ತೊಂದು ಈ ಸಮಾಜದಲ್ಲಿ ಹೆಣ್ಣನ್ನು ನಡೆಸಿಕೊಳ್ಳುತ್ತಿದ್ದ ರೀತಿ. ಅಂದರೆ ಭಾರತ ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಹಿಂದುಳಿದ ರಾಷ್ಟ್ರಗಳ ಪಟ್ಟಿಯಲ್ಲಿ ಸೇರಲ್ಪಟ್ಟಿತ್ತು. ಅದಕ್ಕೆ ಪ್ರಮುಖ ಕಾರಣಗಳೆಂದರೆ ಇಲ್ಲಿದ್ದ ಶ್ರೇಣೀಕೃತ ಸಾಮಾಜಿಕ ವ್ಯವಸ್ಥೆ, ಜಾತಿ ಭೇದ ಹಾಗೂ ಹೆಣ್ಣನ್ನು ಬಹಳ ಕೀಳಾಗಿ ನಡೆಸಿಕೊಂಡು ಆಕೆಯನ್ನು ಶೋಷಣೆಗೆ ಒಳಪಡಿಸಿದ್ದ ಪುರುಷ ಪ್ರಧಾನ ಸಮಾಜ. ಇಂದು ಇಪ್ಪತ್ತೊಂದನೆಯ ಶತಮಾನಕ್ಕೆ ನಾವು ಪ್ರವೇಶ ಮಾಡಿದ್ದರೂ ಸಹ ಈ ರೋಗಗ್ರಸ್ಥ ಸಾಮಾಜಿಕ ವ್ಯವಸ್ಥೆಯಲ್ಲಿ ಹೆಚ್ಚಿನ ಬದಲಾವಣೆಗಳೇನೂ ನಿರೀಕ್ಷಿಸಿದ ಮಟ್ಟದಲ್ಲಿ ಆಗಿಲ್ಲವೆಂದೇ ಹೇಳಬೇಕು.
ಈ ಹಿನ್ನೆಲೆಯಲ್ಲಿ ಅಚ್ಚರಿ ಮೂಡಿಸುವ ವಿಚಾರವೆಂದರೆ ಭಾರತ ದೇಶದ ಒಂದು ಮೂಲೆಯಲ್ಲಿರುವ ಪುಟ್ಟ ಪ್ರದೇಶದಲ್ಲಿ ಇಡೀ ಭಾರತದಲ್ಲಿದ್ದ ವ್ಯವಸ್ಥೆಗಿಂತ ವಿಭಿನ್ನವಾದ ಒಂದು ಸಾಮಾಜಿಕ ವ್ಯವಸ್ಥೆಯಿತ್ತು ಎಂದರೆ ನಂಬಲಸಾಧ್ಯವಾದದ್ದು, ಆದರೆ ನಂಬಲೇ ಬೇಕಾದದ್ದು.
ರಮಣೀಯವಾದ ಪ್ರಕೃತಿ, ಶ್ರೀಮಂತ ಸಂಸ್ಕೃತಿ ಹಾಗೂ ವಿಶಿಷ್ಟ ಭಾಷೆಗಳನ್ನಾಡುವ ವಿಭಿನ್ನ ಜನಸಮುದಾಯಗಳ ನೆಲೆಯಾಗಿರುವ ಕೊಡಗು ಭೌಗೋಳಿಕವಾಗಿ ಪುಟ್ಟ ಜಿ ಯಾದರೂ ತನ್ನ ಶ್ರೀಮಂತ ಸಂಸ್ಕೃತಿಯಿಂದ ಹಾಗೂ ಪ್ರಕೃತಿ ಸೌಂದರ್ಯದಿಂದ ವಿಶ್ವದ ಗಮನವನ್ನು ಸೆಳೆದ ಜಿ.
ಶ್ರೀಮಂತ ಸಂಸ್ಕೃತಿ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ನಾನು ಈ ಸಂದರ್ಭದಲ್ಲಿ ಕೆಲವು ನಿದರ್ಶನಗಳನ್ನು ಕೊಡಬೇಕು ಎಂದೆನಿಸುತ್ತಿದೆ.
ಇಪ್ಪತ್ತೊಂದನೆಯ ಶತಮಾನದ ಆಧುನಿಕ ಸಮಾಜದ ಹೆಣ್ಣು ಕೂಡಾ ತನ್ನ ಹಕ್ಕುಗಳನ್ನು ಹೋರಾಟ ಮಾಡಿ ಪಡೆದುಕೊಳ್ಳಬೇಕಾದ ಅನಿವಾರ್ಯತೆ ನಮ್ಮಲ್ಲಿದೆ. ಆದರೆ ಕೊಡಗಿನ ಸಂಸ್ಕೃತಿಯ ಮೂಲವನ್ನು ಹೊಕ್ಕು ನೋಡಿದರೆ ಪುರಾತನ ಕಾಲದಲ್ಲಿಯೇ ಸ್ತ್ರೀಗೆ ಸಿಗಬೇಕಾದ ಮರ್ಯಾದೆ, ಆದರ, ಗೌರವಗಳು ಆಕೆಗೆ ದಕ್ಕಿದ್ದವು. ವಿಧವಾ ವಿವಾಹ ಆಗಿನ ಕಾಲದಲ್ಲಿಯೇ ಸಾಮಾಜಿಕ ಮನ್ನಣೆಯನ್ನು ಪಡೆದಿತ್ತು. ವರದಕ್ಷಿಣೆ ಪದ್ಧತಿಯೆಂಬ ಪಿಡುಗು ಈ ಸಮಾಜ ದಲ್ಲಿರಲೇ ಇಲ್ಲ. ಪಿತ್ರಾರ್ಜಿತ ಆಸ್ತಿಯಲ್ಲಿ ಹೆಣ್ಣುಮಕ್ಕಳಿಗೂ ಸಮಾನವಾದ ಪಾಲಿತ್ತು. ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ ಎಂಬಂತೆ ಇಲ್ಲಿನ ಸಮಾಜ ಹೆಣ್ಣನ್ನು ಒಂದು ಸಂಸಾರಕ್ಕೆ ಭಾರವೆಂದು ಪರಿಗಣಿಸಿರಲಿಲ್ಲ -ಎಂಬಿತ್ಯಾದಿ ಗಂಭೀರವಾದ ವಿಚಾರಗಳು ಆಧುನಿಕ ಸಮಾಜವನ್ನು ಕೂಡಾ ಬೆರಗುಗೊಳಿಸುವಂಥವುಗಳು. ಇವೇ ಅಲ್ಲದೆ ಇಲ್ಲಿನ ಜಾನಪದರಲ್ಲಿದ್ದ ಪದ್ಧತಿಗಳು, ಆಚರಣೆಗಳು, ನೀತಿ ನಿಯಮಗಳು ಅಲಿಖಿತ ಕಾನೂನುಗಳು ಇಡೀ ವಿಶ್ವಕ್ಕೇ ಮಾದರಿಯಾಗಬಲ್ಲ ವಿಚಾರಗಳು ಎಂದರೆ ಅತಿಶಯೋಕ್ತಿಯಲ್ಲ್ಲ. ಉದಾಹರಣೆಗೆ ಪ್ರಕೃತಿ ಯನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ನಿಟ್ಟಿನಲ್ಲಿ ಸ್ಥಳೀಯರು ಮಾಡಿ ಕೊಂಡಿದ್ದ ದೇವಕಾಡ್(ದೇವರ ಹೆಸರಿನ ಸಂರಕ್ಷಿತವಾದ ಅರಣ್ಯ) ಎಂಬ ಪರಿಕಲ್ಪನೆ, ವೈeನಿಕ ಹಿನ್ನೆಲೆಯನ್ನೊಳಗೊಂಡ ಕೆಲವು ಆಚರಣೆಗಳು, ಪದ್ಧತಿಗಳು, ಪರಸ್ಪರ ಪ್ರೀತಿ, ಗೌರವಗಳಿಂದ ಬದುಕಿ ಬಾಳಿದ ಇಲ್ಲಿನ ವಿವಿಧ ಜನ ಸಮುದಾಯಗಳು, ಊರಿನಲ್ಲಿ ನೆಲೆಸಿದ್ದ ಪ್ರತಿಯೊಂದು ಸಮುದಾಯಗಳಿಗೂ ಸಿಗುತ್ತಿದ್ದ ಪ್ರೀತಿ ಆದರಗಳು ಇವೇ ಮೊದಲಾದ ಅನೇಕ ಅನನ್ಯ ವಿಚಾರಗಳಿಗೆ ಸಂಬಂಧಿಸಿದ ಪುರಾವೆಗಳು ಸ್ಥಳೀಯ ಜನಪದ ಸಾಹಿತ್ಯಗಳಲ್ಲಿ ನಮಗೆ ದೊರಕುತ್ತವೆ. ಇಂಥ ಒಂದು ವಿಶಿಷ್ಟ ಸಂಸ್ಕೃತಿಯ ಕುರಿತಂತೆ ಸ್ಥಳೀಯ ಜಾನಪದ ಪುರಾವೆಗಳ(ಈoಟಞ eಣಥಿmoಟogಥಿ) ಸಹಾಯದಿಂದ ಸ್ಥಳೀಯ ಸಂಸ್ಕೃತಿಯನ್ನು ವಿಶ್ಲೇಷಿಸುವುದು ನನ್ನ ಈ ಲೇಖನಗಳ ಉzಶ.
ಬದುಕಿನಲ್ಲಿ ಯಾರೂ ನೂರಕ್ಕೆ ನೂರು ಸುಖಿಗಳೂ ಅಲ್ಲ ದುಃಖಿಗಳೂ ಅಲ್ಲ. ಸುಖ ದುಃಖಗಳ ಸಂಗಮದ ನೆನಪಿನ ಬುತ್ತಿ ಪ್ರತಿಯೊಬ್ಬರ ಬದುಕಿನಲ್ಲಿಯೂ ಅವರೊಂದಿಗೆ ಇz ಇರುತ್ತದೆ. ಮರುಭೂಮಿಯಲ್ಲಿ ಓಯಸಿಸ್ಗಳಂತೆ ಮನುಷ್ಯನ ಬದುಕಿನಲ್ಲಿ ನೆನಪುಗಳು. ಯಾಂತ್ರಿಕವಾದ ಇಂದಿನ ಜೀವನ ಶೈಲಿಯಲ್ಲಿ ಅಪರೂಪಕ್ಕೊಮ್ಮೆ ಏಕಾಂತ ವಾಗಿzಗ ನಮ್ಮ ನೆನಪಿನ ಬುತ್ತಿಯನ್ನು ಬಿಚ್ಚುವ, ಬಿಚ್ಚಿ ವಿಶ್ಲೇಷಿಸುವ ಮಂಥನ ನಮ್ಮ ಮನಸ್ಸಿನಲ್ಲಿ ನಡೆಯುತ್ತವೆ. ನಾನೂ ಇದರಿಂದ ಹೊರತಲ್ಲ. ಕೊಡಗಿನಲ್ಲಿ ಹುಟ್ಟಿ ಬೆಳೆದರೂ ಇಂದು ನಾನಲ್ಲಿ ನೆಲೆಸದೆ ಸುಮಾರು ೨೨ ವರ್ಷಗಳೇ ಕಳೆದಿವೆ. ಆದರೆ ನಾನು ಹುಟ್ಟಿ ಬೆಳೆದ ಕೊಡವ ಸಮುದಾಯ, ಪರಿಸರ, ಪ್ರಕೃತಿ, ಸಂಸ್ಕೃತಿ, ಜನ, ಭಾಷೆ ಇವೇ ಮೊದಲಾದ ವಿಚಾರಗಳಿಗೆ ಸಂಬಂಧಿಸಿದಂತೆ ಅನೇಕ ನೆನಪುಗಳು ನನ್ನ ಮನಸ್ಸಿನಲ್ಲಿ ಸದಾ ಹಸಿರಾಗಿಯೇ ಇವೆ. ನನ್ನ ಅಜ್ಜಿ ಅಂದರೆ ನನ್ನ ತಂದೆಯ ತಾಯಿಯವರು ಮಾತನಾಡುತ್ತಿದ್ದ ಕೊಡವ ಭಾಷೆಯ ವಿಶಿಷ್ಟಶೈಲಿ, ಮಾತಿನ ನಡುವೆ ಅವರು ಬಳಸುತ್ತಿದ್ದ ಕೊಡವ ಗಾದೆಗಳು, ಒಗಟುಗಳು, ಊರಿನಲ್ಲಿ ನಡೆಯುತ್ತಿದ್ದ ವಿವಿಧ ಹಬ್ಬಗಳು, ಆಚರಣೆಗಳು, ಈ ಹಬ್ಬ ಹಾಗೂ ಆಚರಣೆಗಳ ಸಂದರ್ಭಗಳಲ್ಲಿ ಇರುತ್ತಿದ್ದ ಕಟ್ಟು ಕಟ್ಟಳೆಗಳು, ನೀತಿ ನಿಯಮಗಳು, ಭಯ-ಭಕ್ತಿಗಳು ಇವುಗಳನ್ನು ಕುರಿತಂತೆ ನನ್ನ ಕುತೂಹಲದ ಪ್ರಶ್ನೆಗಳಿಗೆ ನನ್ನ ಅಜ್ಜಿಯವರು ನೀಡುತ್ತಿದ್ದ ಉತ್ತರಗಳು, ಊರಿನಲ್ಲಿದ್ದ ವಿವಿಧ ಜನಸಮುದಾಯಗಳು, ಮನೆಗೆ ಅವರು ಬಂದರೆ ಅವರನ್ನು ಮನೆಯವರು ನಡೆಸಿಕೊಳ್ಳುತ್ತಿದ್ದ ರೀತಿ, ಮಳೆಗಾಲದ ವಿಶಿಷ್ಟ ಆಹಾರ ಪದ್ಧತಿಗಳು, ವಿಭಿನ್ನ ಉಡುಗೆ ತೊಡುಗೆಗಳು, ಸ್ಥಳೀಯರ ವಿಶಿಷ್ಟ ಜೀವನಶೈಲಿ ಇವೇ ಮೊದಲಾದ ಅನೇಕ ವಿಚಾರಗಳಿಗೆ ಸಂಬಂಧಿಸಿದಂತೆ ಇರುವ ನನ್ನ ನೆನಪಿನ ಬುತ್ತಿ ಬಹಳ ದೊಡ್ಡದು. ಬಿಡುವಾದಾಗ, ಏಕಾಂಗಿಯಾಗಿzಗ, ಒಂದೊಂದೇ ನೆನಪುಗಳ ಬುತ್ತಿ ಬಿಚ್ಚಿದಾಗ ಅವು ಪ್ರಶ್ನೆಗಳು, ಉತ್ತರಗಳು, ಟೀಕೆ, ಟಿಪ್ಪಣಿಗಳ ರೂಪ ತಳೆದು ಅವು ಗಳನ್ನು ಕುರಿತಂತೆ ನಾಲ್ಕು ಅPರ ಗೀಚಬಾರದೇಕೆ ಎಂದೆನಿಸುತ್ತದೆ. ಅಂಥ ಸಂದರ್ಭದಲ್ಲಿ ನನ್ನ ಮನಸ್ಸಿನಲ್ಲಿಯೇ ನಡೆದ ಪ್ರಶ್ನೋತ್ತರಗಳ ವಾಗ್ಯುದ್ಧದ ಪ್ರತಿಫಲನವೇ ಈ ವಿವಕ್ಷಾ.
ನಮ್ಮ ಬದುಕು ವಿಸ್ತಾರವಾದಂತೆ ವಿವಿಧ ದೇಶ, ಭಾಷೆ, ಸಂಸ್ಕೃತಿ ಇವೇ ಮೊದಲಾದ ಅನೇಕ ವಿಚಾರಗಳಿಗೆ ನಮ್ಮ ಮನಸ್ಸು ತೆರೆದುಕೊಳ್ಳುತ್ತಾ ಸಾಗುತ್ತದೆ. ಈ ಪಯಣದಲ್ಲಿ ಕೆಲವೊಂದು ಸಂಗತಿಗಳು ಮನಸ್ಸಿನ ಅಚ್ಚೊತ್ತಿದಂತೆ ಉಳಿದುಬಿಡುತ್ತವೆ. ಇಂಥ ಸಂಗತಿಗಳು ಕೇವಲ ಸುಪ್ತವಾಗಿ ಮನದಲ್ಲಿ ಉಳಿದುಬಿಟ್ಟರೆ ಏನೂ ಸಮಸ್ಯೆಯಿಲ್ಲ. ಆದರೆ ನೆನಪುಗಳು ಕಾಡುತ್ತವೆ ಎಂಬಂತೆ ನಮ್ಮ ಮನಸ್ಸನ್ನು ಕಾಡಲು ಪ್ರಾರಂಭಿಸಿದಾಗ ಇದು ಏಕೆ ಹೀಗೆ? ಎಂಬ ಪ್ರಶ್ನೆಗೆ ಉತ್ತರವನ್ನು ಕಂಡುಕೊಳ್ಳಲು ಹುಡುಕಾಟ ಪ್ರಾರಂಭವಾಗುತ್ತದೆ. ಈ ಸಂದರ್ಭದಲ್ಲಿ ದೊರೆತ ಉತ್ತರಗಳು ನಿಖರವೆಂಬ ಅಥವಾ ಸಮರ್ಪಕವೆಂಬ ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲದಿದ್ದರೂ ಮತ್ತೊಂದು ರೀತಿಯ ಆಲೋಚನೆಗಳಿಗೆ, ಬೇರೊಂದು ಬಗೆಯ ವಿಮರ್ಶೆಗಳಿಗೆ ದಾರಿಯನ್ನು ಮಾಡಿಕೊಟ್ಟಂತಾಗುತ್ತದೆ. ಅದರಿಂದಾಗಿ ನನ್ನ ಈ ಸಂಕಲನದಲ್ಲಿರುವ ವಿವಿಧ ಲೇಖನಗಳು ಯಾವುದೇ ವಿಚಾರವನ್ನು ಸಾಬೀತು ಮಾಡುವ ನಿಟ್ಟಿನಲ್ಲಿ ಬರೆದವುಗಳಲ್ಲ. ಈ ಮೊದಲೇ ಹೇಳಿದಂತೆ ನನ್ನ ಮನಸ್ಸಿನ ತುಮುಲ ಗಳಿಗೆ ನನ್ನದೇ ಆದ ದೃಷ್ಟಿಕೋನದಲ್ಲಿ ಕಂಡುಕೊಂಡ ಕೆಲವು ಸಂತೈಕೆಗಳು ಹಾಗೂ ಸಾಂತ್ವನಗಳು ಅಷ್ಟೆ.
ತಮ್ಮ ಬಿಡುವಿಲ್ಲದ ದಿನಚರಿಯಲ್ಲಿಯೂ ತಾಳ್ಮೆಯಿಂದ ನನ್ನೆಲ್ಲ ಸಮಸ್ಯೆಗಳಿಗೆ ಸ್ಪಂದಿಸಿ, ಸೂಕ್ತ ಸಲಹೆ-ಸೂಚನೆ, ಮಾರ್ಗದರ್ಶನಗಳನ್ನಿತ್ತು, ನನ್ನ ಈ ಸಂಕಲನದ ಲೇಖನಗಳನ್ನೆಲ್ಲ್ಲ ಓದಿ ಬೆನ್ನುಡಿ ಬರೆದು ಪ್ರೋತ್ಸಾಹಿಸಿದ ಶ್ರೇಷ್ಟ ವಿದ್ವಾಂಸರೂ, ಇತಿಹಾಸತಜ್ಞರೂ ಆದ ಮಾನ್ಯಶ್ರೀ ಪ್ರೊ. ವಿಜಯ್ ಪೂಣಚ್ಚ ತಂಬಂಡ ಅವರಿಗೆ ನನ್ನ ಅನಂತ ಅನಂತ ವಂದನೆಗಳು. ಈ ಸಂಕಲನದ ಲೇಖನಗಳನ್ನು ಆಸಕ್ತಿಯಿಂದ ಓದಿ ಮುಕ್ತ ಕಂಠದಿಂದ ಶ್ಲಾಘಿಸಿ, ತುಂಬು ಹೃದಯದಿಂದ ಹರಸಿ, ಹಾರೈಸಿ ಮುನ್ನುಡಿ ಬರೆದು ಪ್ರೋತ್ಸಾಹಿಸಿದ ವಿದ್ವಾಂಸರಾದ ಪ್ರೊ. ತಳವಾರ್ ಸರ್ ಅವರಿಗೆ ನನ್ನ ಹೃತ್ಪೂರ್ವಕವಾದ ಕೃತಜ್ಞತೆಗಳು.
ಈ ಕೃತಿಯನ್ನು ಬಹಳ ಸುಂದರವಾಗಿ ಅಚ್ಚುಕಟ್ಟಾಗಿ ಪ್ರಕಟಿಸಿ ಹೊರತರುತ್ತಿರುವ ಹೊಸಪೇಟೆಯ ಯಾಜಿ ಪ್ರಕಾಶನದ ಶ್ರೀಮತಿ ಸವಿತಾ ಯಾಜಿ ಮತ್ತು ಗಣೇಶ್ ಯಾಜಿ ಅವರಿಗೆ ಆಭಾರಿಯಾಗಿದ್ದೇನೆ. ಹಾಗೂ ಈ ಸಂಕಲನ ಪ್ರಕಟವಾಗಲು ಪ್ರತ್ಯPವಾಗಿ ಹಾಗೂ ಪರೋPವಾಗಿ ಸಹಕರಿಸಿದ ಮಹನೀಯರೆಲ್ಲರಿಗೂ ನನ್ನ ಅನಂತ ವಂದನೆಗಳು.
ಡಾ. ಲಲಿತ ಕೆ ಪಿ
Reviews
There are no reviews yet.